<p>ಕೃಷ್ಣರಾಜಪೇಟೆ: ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುತ್ತಿದ್ದ ಪಟ್ಟಣದ ಹಣಕಾಸು ಸಂಸ್ಥೆಯ ಕಚೇರಿ ಬಾಗಿಲು ಕಳೆದ ಕೆಲವು ದಿನಗಳಿಂದ ಮುಚ್ಚ ಲಾಗಿದ್ದು, ಠೇವಣಿ ಇಟ್ಟವರಲ್ಲಿ ಆತಂಕ ಮೂಡಿಸಿದೆ. <br /> <br /> ಸ್ವಯಂಕೃಷಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ ಹೆಸರಿನ ಈ ಸಂಸ್ಥೆ ಪಟ್ಟಣದ ಕಿಕ್ಕೇರಿ ರಸ್ತೆಯಲ್ಲಿ ತನ್ನ ಕಚೇರಿ ಹೊಂದಿದೆ. ಏಜೆಂಟರ ಮೂಲಕ ಸಾರ್ವಜನಿಕರಿಂದ ದೈನಂದಿನ ಪಿಗ್ಮಿ ಸಂಗ್ರಹಿಸುತ್ತಿತ್ತು. ನೂರಕ್ಕೂ ಹೆಚ್ಚು ಪುರುಷ ಮತ್ತು ಮಹಿಳೆಯರು ಪಿಗ್ಮಿ ಸಂಗ್ರಹಕಾರರು ಇಲ್ಲಿ ಕೆಲಸ ಮಾಡುತ್ತಿದ್ದರು.<br /> <br /> ದಿನಗೂಲಿ ಕಾರ್ಮಿ ಕರು, ಸಣ್ಣಪುಟ್ಟ ವ್ಯಾಪಾರಿಗಳು, ಖಾಸಗಿ ಸಂಸ್ಥೆಗಳ ನೌಕರರು ಸೇರಿದಂತೆ ವಿವಿಧ ವರ್ಗದ ಜನರು ಈ ಸಂಸ್ಥೆಗೆ ದಿನನಿತ್ಯ ಠೇವಣಿ ಕಟ್ಟುತ್ತಿದ್ದರು. ಆದರೆ ಒಂದು ವಾರದಿಂದ ಸಂಸ್ಥೆಯ ಬಾಗಿಲು ಮುಚ್ಚಿರುವುದಿಂದ ಸಂಸ್ಥೆ ನಮಗೆ ಮೋಸ ಮಾಡಿದೆ ಎಂದೇ ಸಾರ್ವಜನಿಕರು ಭಾವಿಸಿದ್ದಾರೆ. <br /> <br /> ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಠೇವಣಿ ಸಂಗ್ರಹಕಾರರು ತಮ್ಮ ಮೊಬೈಲ್ ಸ್ಥಗಿತಗೊಳಿಸಿದ್ದಾರೆ. ಇದು ಠೇವಣಿದಾರರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. <br /> <br /> ಪ್ರತಿದಿನದ ಶ್ರಮದ ಒಂದು ಪಾಲನ್ನು ತಮ್ಮ ಕುಟುಂಬದ ಭವಿಷ್ಯಕ್ಕಾಗಿ ಸಂಸ್ಥೆಯಲ್ಲಿ ಉಳಿತಾಯ ಮಾಡಿದ್ದ ಜನರು ದಾರಿ ತಿಳಿಯದೆ ಕಂಗಾಲಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೃಷ್ಣರಾಜಪೇಟೆ: ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುತ್ತಿದ್ದ ಪಟ್ಟಣದ ಹಣಕಾಸು ಸಂಸ್ಥೆಯ ಕಚೇರಿ ಬಾಗಿಲು ಕಳೆದ ಕೆಲವು ದಿನಗಳಿಂದ ಮುಚ್ಚ ಲಾಗಿದ್ದು, ಠೇವಣಿ ಇಟ್ಟವರಲ್ಲಿ ಆತಂಕ ಮೂಡಿಸಿದೆ. <br /> <br /> ಸ್ವಯಂಕೃಷಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ ಹೆಸರಿನ ಈ ಸಂಸ್ಥೆ ಪಟ್ಟಣದ ಕಿಕ್ಕೇರಿ ರಸ್ತೆಯಲ್ಲಿ ತನ್ನ ಕಚೇರಿ ಹೊಂದಿದೆ. ಏಜೆಂಟರ ಮೂಲಕ ಸಾರ್ವಜನಿಕರಿಂದ ದೈನಂದಿನ ಪಿಗ್ಮಿ ಸಂಗ್ರಹಿಸುತ್ತಿತ್ತು. ನೂರಕ್ಕೂ ಹೆಚ್ಚು ಪುರುಷ ಮತ್ತು ಮಹಿಳೆಯರು ಪಿಗ್ಮಿ ಸಂಗ್ರಹಕಾರರು ಇಲ್ಲಿ ಕೆಲಸ ಮಾಡುತ್ತಿದ್ದರು.<br /> <br /> ದಿನಗೂಲಿ ಕಾರ್ಮಿ ಕರು, ಸಣ್ಣಪುಟ್ಟ ವ್ಯಾಪಾರಿಗಳು, ಖಾಸಗಿ ಸಂಸ್ಥೆಗಳ ನೌಕರರು ಸೇರಿದಂತೆ ವಿವಿಧ ವರ್ಗದ ಜನರು ಈ ಸಂಸ್ಥೆಗೆ ದಿನನಿತ್ಯ ಠೇವಣಿ ಕಟ್ಟುತ್ತಿದ್ದರು. ಆದರೆ ಒಂದು ವಾರದಿಂದ ಸಂಸ್ಥೆಯ ಬಾಗಿಲು ಮುಚ್ಚಿರುವುದಿಂದ ಸಂಸ್ಥೆ ನಮಗೆ ಮೋಸ ಮಾಡಿದೆ ಎಂದೇ ಸಾರ್ವಜನಿಕರು ಭಾವಿಸಿದ್ದಾರೆ. <br /> <br /> ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಠೇವಣಿ ಸಂಗ್ರಹಕಾರರು ತಮ್ಮ ಮೊಬೈಲ್ ಸ್ಥಗಿತಗೊಳಿಸಿದ್ದಾರೆ. ಇದು ಠೇವಣಿದಾರರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. <br /> <br /> ಪ್ರತಿದಿನದ ಶ್ರಮದ ಒಂದು ಪಾಲನ್ನು ತಮ್ಮ ಕುಟುಂಬದ ಭವಿಷ್ಯಕ್ಕಾಗಿ ಸಂಸ್ಥೆಯಲ್ಲಿ ಉಳಿತಾಯ ಮಾಡಿದ್ದ ಜನರು ದಾರಿ ತಿಳಿಯದೆ ಕಂಗಾಲಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>