ಮೇ 13ರಂದು ಮಧ್ಯಾಹ್ನ ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದವು. ಅಸ್ವಸ್ಥಗೊಂಡ 12 ಜನರನ್ನು ಪಕ್ಷಿಧಾಮದ ಸಿಬ್ಬಂದಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದರು. ಹೆಜ್ಜೇನು ಗುಂಪು ದೋಣಿ ವಿಹಾರ ಕೇಂದ್ರದ ಬಳಿಯ ರೈಟ್ರಿ ಮರದಲ್ಲಿ ಇನ್ನೂ ಬೀಡು ಬಿಟ್ಟಿದೆ. ಹೀಗಾಗಿ ಬುಧವಾರ ಸಂಜೆವರೆಗೂ ಪಕ್ಷಿಧಾಮಕ್ಕೆ ಪ್ರವೇಶ ಇರಲಿಲ್ಲ.