ಭಾರತೀನಗರ: ಬೆಂಗಳೂರು– ಮೈಸೂರು ಹೆದ್ದಾರಿಯ ಅಷ್ಟಪಥದ ಕಾಮಗಾರಿ ಶೀಘ್ರದಲ್ಲೇ ಆರಂಭಗೊಳ್ಳ ಲಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದರು.
ಇಲ್ಲಿನ ಭಾರತೀ ಕಾಲೇಜಿನಲ್ಲಿ ಬುಧವಾರ ಭಾರತೀ ಭವನ ಹಾಗೂ ಕುವೆಂಪು ಸಭಾಂಗಣ ಉದ್ಘಾಟಿಸಿ ಮಾತ ನಾಡಿದ ಅವರು, ಈ ಹೆದ್ದಾರಿ ವಿಸ್ತರಣೆ ಯಿಂದ ಸಂಚಾರದ ಒತ್ತಡ ನಿವಾರಣೆ ಯಾಗಲಿದೆ. ಅಲ್ಲದೆ, ಈ ಭಾಗದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಹೇಳಿದರು.
ಅಂಬೇಡ್ಕರ್ ಅವರು ಶಿಕ್ಷಣ, ಸಮಾನತೆ, ರಾಜಕೀಯ ಮಹಿಳೆಯರಿಗೆ ದೊರಕಬೇಕೆಂಬ ಆಶಯ ಹೊತ್ತಿದ್ದರು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹಿಳೆಯ ರ ಅಭಿವೃದ್ಧಿಗಾಗಿ ಹಲವು ಯೋಜನೆ ಜಾರಿಗೊಳಿಸಿದೆ ಎಂದರು.
ಮಾಜಿ ಸಂಸದ ಡಾ.ಜಿ.ಮಾದೇ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಮಧು ಜಿ.ಮಾದೇಗೌಡ, ಬಿಇಟಿ ಕಾರ್ಯಾಧ್ಯಕ್ಷ ಬಿ.ಬಸವರಾಜು, ಕಾರ್ಯ ದರ್ಶಿಗಳಾದ ಬಿ.ಎಂ.ನಂಜೇ ಗೌಡ, ಸಿದ್ದೇಗೌಡ, ಜಿ.ಪಂ ಸದಸ್ಯ ಎ.ಎಸ್. ರಾಜೀವ್, ತಾ.ಪಂ ಸದಸ್ಯ ಗಿರೀಶ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಹರ್ಷ, ಮುದ್ದಯ್ಯ ಇತರರು ಇದ್ದರು.
ಕಾಮಗಾರಿ ವೀಕ್ಷಣೆ: ಮದ್ದೂರು– ಮಳವಳ್ಳಿ ಮುಖ್ಯರಸ್ತೆ ಕಾಮಗಾರಿ ವೀಕ್ಷಿಸಿದ ಸಚಿವರು, ಕಾಮಗಾರಿಯ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.