ಒಣಗಿ ನಿಂತಿದ್ದ ಭತ್ತದ ಗದ್ದೆಗಳಲ್ಲಿ ನೀರು ಸಂಗ್ರಹವಾಗಿದ್ದು, ಉಳುಮೆ ಕೆಲಸಕ್ಕೆ ಪೂರಕವಾದ ವಾತಾವರಣ ಎಲ್ಲೆಡೆ ಕಂಡು ಬರುತ್ತಿದೆ. ಲಿಂಗನಮಕ್ಕಿ ಜಲಾಶಯದ ಕೆಳಭಾಗದ ನದಿ ತೀರ ಪ್ರದೇಶಗಳಾದ ಇಡುವಾಣಿ, ಮರಳುಕೋರೆ, ಕಾರ್ಗಲ್, ಜೋಗ, ಬಿದರೂರು, ಹೆನ್ನಿ ತಳಕಳಲೆ ಗ್ರಾಮಗಳು ಸೇರಿದಂತೆ ಭತ್ತದ ಗದ್ದೆಗಳಲ್ಲಿ ಎತ್ತುಗಳನ್ನು ಬಳಸಿ ಉಳುಮೆ ಕೆಲಸಕ್ಕೆ ರೈತರು ಮುಂದಾಗಿದ್ದಾರೆ.