ಕೇರಳದ ಸಪ್ನಾ ಆಭರಣ ಅಂಗಡಿ ಮಾಲೀಕ ಆಗಿರುವ ಸುರಾಜ್ ಹಾಗೂ ಇವರ ಸ್ನೇಹಿತರು, ಬೆಂಗಳೂರಿನಿಂದ ₹ 1 ಕೋಟಿ ನಗದನ್ನು ತೆಗೆದುಕೊಂಡು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಬುಧವಾರ ನಸುಕಿನಲ್ಲಿ ಚಿಲ್ಕುಂದ ಗ್ರಾಮದ ಬಳಿ ಎರಡು ಕಾರಿನಲ್ಲಿ ಬಂದ ದರೋಡೆಕೋರರು ಅವರನ್ನು ಅಡ್ಡಗಟ್ಟಿದ್ದಾರೆ. ಕಾರಿನಿಂದ ಹೊರದಬ್ಬಿ, ಹಲ್ಲೆ ನಡೆಸಿ, ಹಣದೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.