ಜೂನ್ 23ರಂದು ‘ಹೊಗೆಗೆ ನಲುಗಿದ ಜನತೆ’ ಶೀರ್ಷಿಕೆಯಡಿ ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತನಿಖೆ ನಡೆಸಲು ಸೂಚಿಸಿದ್ದರು. ಇನ್ಸ್ಪೆಕ್ಟರ್ ಶಶಿಕುಮಾರ್, ಸಿಬ್ಬಂದಿಯಾದ ಕೆಂಪಣ್ಣ, ತಿರುಮಲೇಶ್, ಎಎಸ್ಐ ಶಾಂತ ಲಿಂಗಯ್ಯ, ನಾರಾಯಣಮೂರ್ತಿ, ಸೋಮಶೇಖರ್, ರಘು, ಗಿರೀಶ್, ಪ್ರಸಾದ್, ದೇವಪ್ಪಶರಣಪ್ಪ ಕಾರ್ಯಾಚರಣೆ ತಂಡದಲ್ಲಿದ್ದರು.