ಸಾರ್ವಜನಿಕ ಸಭೆ, ಸಮಾರಂಭಗಳು, ಹೋಟೆಲ್ಗಳು, ಕ್ಲಬ್ಗಳು ಸೇರಿದಂತೆ ಜನರು ಗುಂಪುಗೂಡುವ ಪ್ರದೇಶಗಳಲ್ಲಿ ಕೋವಿಡ್ ನಿಯಮ ಉಲ್ಲಂಘಿಸುವ ಸಂಬಂಧ ಪ್ರಕರಣಗಳನ್ನು ದಾಖಲಿಸಲೆಂದೇ ‘ಕೋವಿಡ್ ಅಪ್ರೊಪರೀಯೇಟ್ ಬಿವೇವಿಯರ್ ಮಾನಿಟರಿಂಗ್ ಟೀಮ್’ (ಸಿಎಬಿ) ಅನ್ನು ರಚಿಸಲಾಗಿದೆ. ಸಬ್ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಒಟ್ಟು ನಾಲ್ವರು ಸಿಬ್ಬಂದಿ ಪ್ರತಿ ವಾಹನದಲ್ಲಿದ್ದು, ಗಸ್ತು ಕಾರ್ಯ ನಡೆಸುವರು. ಇಂತಹ ಒಟ್ಟು 3 ವಾಹನಗಳು ಕೃಷ್ಣರಾಜ, ನರಸಿಂಹರಾಜ ಹಾಗೂ ಚಾಮರಾಜ ಉಪವಿಭಾಗಗಳಲ್ಲಿ ಸಂಚರಿಸಲಿವೆ ಎಂದು ಮಾಹಿತಿ ನೀಡಿದರು.