ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಬಳವಾಗಿಲ್ಲ ಎಂದಿದ್ದಕ್ಕೆ ಸಚಿವರ ಸಿಡಿಮಿಡಿ!

Last Updated 18 ಫೆಬ್ರುವರಿ 2021, 21:58 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಕಲಾಮಂದಿರದ ನೌಕರರಿಗೆ 5 ತಿಂಗಳಿಂದ ಸಂಬಳವಾಗಿಲ್ಲ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಹೇಳುತ್ತಿದ್ದಂತೆಯೇ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಸಿಡಿಮಿಡಿಗೊಂಡರು.

ಸಚಿವರು ಗುರುವಾರ ರಂಗಾಯಣಕ್ಕೆ ಭೇಟಿ ನೀಡಿ, ಕಲಾವಿದರ ಸಮಸ್ಯೆಗಳನ್ನು ಆಲಿಸುವ ಸಂದರ್ಭದಲ್ಲಿ, ನಿರ್ದೇಶಕರು ಈ ವಿಚಾರವನ್ನು ಅವರ ಗಮನಕ್ಕೆ ತಂದರು.

‘ಕಲಾಮಂದಿರದ ನೌಕರರು 5 ತಿಂಗಳುಗಳಿಂದ ಸಂಬಳ ಇಲ್ಲದೇ ಪರದಾಡುತ್ತಿದ್ದಾರೆ. ನೆನ್ನೆ ನನ್ನ ಕಚೇರಿಗೆ ಬಂದು ಮನವಿ ಮಾಡಿದರು’ ಎಂದು ಹೇಳುತ್ತಿರುವಾಗ ಅವರ ಮಾತನ್ನು ತಡೆದ ಸಚಿವರು, ‘ಯಾವುದನ್ನು ಎಲ್ಲಿ ಹೇಳಬೇಕೋ ಅಲ್ಲಿ ಹೇಳಿ. ಈ ವಿಷಯವನ್ನು ನನ್ನ ಕಚೇರಿಗೆ ಬಂದು ಮಾತನಾಡಿ. ರಂಗಾಯಣದ ನಿರ್ದೇಶಕರಾಗಿದ್ದೀರಿ; ಅಷ್ಟೂ ಗೊತ್ತಾಗುವುದಿಲ್ಲವೇ?’ ಎಂದು ರೇಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT