ಸಂಬಳವಾಗಿಲ್ಲ ಎಂದಿದ್ದಕ್ಕೆ ಸಚಿವರ ಸಿಡಿಮಿಡಿ!

ಮೈಸೂರು: ಇಲ್ಲಿನ ಕಲಾಮಂದಿರದ ನೌಕರರಿಗೆ 5 ತಿಂಗಳಿಂದ ಸಂಬಳವಾಗಿಲ್ಲ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಹೇಳುತ್ತಿದ್ದಂತೆಯೇ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಸಿಡಿಮಿಡಿಗೊಂಡರು.
ಸಚಿವರು ಗುರುವಾರ ರಂಗಾಯಣಕ್ಕೆ ಭೇಟಿ ನೀಡಿ, ಕಲಾವಿದರ ಸಮಸ್ಯೆಗಳನ್ನು ಆಲಿಸುವ ಸಂದರ್ಭದಲ್ಲಿ, ನಿರ್ದೇಶಕರು ಈ ವಿಚಾರವನ್ನು ಅವರ ಗಮನಕ್ಕೆ ತಂದರು.
‘ಕಲಾಮಂದಿರದ ನೌಕರರು 5 ತಿಂಗಳುಗಳಿಂದ ಸಂಬಳ ಇಲ್ಲದೇ ಪರದಾಡುತ್ತಿದ್ದಾರೆ. ನೆನ್ನೆ ನನ್ನ ಕಚೇರಿಗೆ ಬಂದು ಮನವಿ ಮಾಡಿದರು’ ಎಂದು ಹೇಳುತ್ತಿರುವಾಗ ಅವರ ಮಾತನ್ನು ತಡೆದ ಸಚಿವರು, ‘ಯಾವುದನ್ನು ಎಲ್ಲಿ ಹೇಳಬೇಕೋ ಅಲ್ಲಿ ಹೇಳಿ. ಈ ವಿಷಯವನ್ನು ನನ್ನ ಕಚೇರಿಗೆ ಬಂದು ಮಾತನಾಡಿ. ರಂಗಾಯಣದ ನಿರ್ದೇಶಕರಾಗಿದ್ದೀರಿ; ಅಷ್ಟೂ ಗೊತ್ತಾಗುವುದಿಲ್ಲವೇ?’ ಎಂದು ರೇಗಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.