ಮೈಸೂರು, ಕೊಡಗು ಜಿಲ್ಲೆಗಳ ಪಾರಂಪರಿಕ ತಾಣಗಳು, ಪ್ರಾಕೃತಿಕ ಸಿರಿತನವನ್ನು ಕಲಾವಿದ ತಮ್ಮ ಕುಂಚದಲ್ಲಿ ಸೆರೆ ಹಿಡಿದಿದ್ದಾರೆ. ಚಾಮುಂಡಿಬೆಟ್ಟ, ಡಾ.ರಾಜಕುಮಾರ್ ಉದ್ಯಾನ, ಮಾನಸಗಂಗೋತ್ರಿಯಲ್ಲಿರುವ ಬೃಹತ್ ಅರಳಿ ಮರ, ಜಯಚಾಮರಾಜೇಂದ್ರ ವೃತ್ತ, ಇರ್ವಿನ್ ರಸ್ತೆ, ನಗರ ಬಸ್ ನಿಲ್ದಾಣ, ವಿಧಾನಸೌಧ, ಶ್ರೀರಂಗಪಟ್ಟಣದ ಬೇಸಿಗೆ ಅರಮನೆ, ಸುಂಟಿಕೊಪ್ಪ ಮತ್ತು ಸೋಮವಾರಪೇಟೆಯ ಮಳೆಗಾಲದ ಚಿತ್ರಣ ಸೇರಿದಂತೆ ಹಲವಾರು ಚಿತ್ರಗಳು ಗಮನ ಸೆಳೆಯುತ್ತವೆ. ಮೇ 31ರ ವರೆಗೂ ಚಿತ್ರಕಲಾ ಪ್ರದರ್ಶನ ವೀಕ್ಷಕರಿಗೆ ತೆರೆದಿರುತ್ತದೆ.