<p><strong>ಮೈಸೂರು</strong>: ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಶುಕ್ರವಾರ ಆಷಾಢ ಅಮಾವಾಸ್ಯೆ ಆಚರಿಸಲಾಯಿತು.</p>.<p>ನಸುಕಿನ 5.30ಕ್ಕೆ ನಾಡದೇವತೆಗೆ ವಿಶೇಷ ಪೂಜೆ, ಅಭಿಷೇಕ ಮಾಡಲಾಯಿತು. ಬೆಳಿಗ್ಗೆ 7.30ರ ವೇಳೆಗೆ ಮಹಾ ಮಂಗಳಾರತಿ ನಡೆಯಿತು.</p>.<p>ದೇಗುಲದ ಪ್ರಾಂಗಣದಲ್ಲೇ ದೇವಾಲಯದ ಅರ್ಚಕರು ಉತ್ಸವ ಮೂರ್ತಿಯ ಮೆರವಣಿಗೆ ಮಾಡಿದರು. 7.45ರ ವೇಳೆಗೆ ಕೋವಿಡ್ ಲಾಕ್ಡೌನ್ ನಿಯಮಾವಳಿಯಂತೆ ದೇಗುಲದ ಬಾಗಿಲಿಗೆ ಬೀಗ ಹಾಕಲಾಯಿತು.</p>.<p>ಸಂಜೆಯೂ ದೇವಿಗೆ ವಿಶೇಷ ಪೂಜೆಗೈದು, ಮಹಾಮಂಗಳಾರತಿ ಅರ್ಪಿಸಲಾಯಿತು.</p>.<p>ಜಿಲ್ಲಾಡಳಿತ ಆಷಾಢ ಅಮಾವಾಸ್ಯೆಯಂದು ಚಾಮುಂಡೇಶ್ವರಿಯ ದರ್ಶನವನ್ನು ಸಾರ್ವಜನಿಕರಿಗೆ ನಿರ್ಬಂಧಿಸಿದ್ದರೂ; ಅಸಂಖ್ಯಾತ ಭಕ್ತರು ಚಾಮುಂಡಿ ಬೆಟ್ಟಕ್ಕೆ ದೇವಿ ದರ್ಶನ ಪಡೆಯಲಿಕ್ಕಾಗಿ ನಸುಕಿನಲ್ಲೇ ದೌಡಾಯಿಸಿದ್ದರು.</p>.<p>ಜಿಲ್ಲಾಡಳಿತದ ಆದೇಶದಂತೆ ಪೊಲೀಸರು ಬೆಟ್ಟ ಪ್ರವೇಶಿಸುವ ಎಲ್ಲ ರಸ್ತೆಗಳಲ್ಲೂ ನಾಕಾಬಂದಿ ಹಾಕಿದ್ದರು. ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಯಾರೊಬ್ಬರು ಬೆಟ್ಟ ಪ್ರವೇಶಿಸದಂತೆ ಕಾವಲು ಕಾದ ಚಿತ್ರಣ ಶುಕ್ರವಾರ ದಿನವಿಡಿ ಗೋಚರಿಸಿತು.</p>.<p>ಆಷಾಢ ಇಂದಿನಿಂದ: ‘ಆಷಾಢ ಮಾಸ ಶನಿವಾರದಿಂದ ಆರಂಭ. ಶಕ್ತಿ ದೇವತೆ ಆರಾಧನೆಯ ಪುಣ್ಯ ಕಾಲವಿದು. ಈ ತಿಂಗಳಲ್ಲಿ ಚಾಮುಂಡೇಶ್ವರಿಯ ಆರಾಧನೆಯಿಂದ ಭಕ್ತರ ಸಕಲ ಇಷ್ಟಾರ್ಥ ನೆರವೇರಲಿವೆ’ ಎಂದು ದೇಗುಲದ ಪ್ರಧಾನ ಅರ್ಚಕ ಎನ್.ಶಶಿಶೇಖರ ದೀಕ್ಷಿತ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಆಷಾಢ ಮಾಸದಲ್ಲಿ ದೇವಿಗೆ ನಿತ್ಯವೂ ಎಂದಿನಂತೆ ಅಭಿಷೇಕ, ವಿಶೇಷ ಪೂಜೆ ಮಾಡುತ್ತೇವೆ. ಜುಲೈ 16, 23 (ಆಷಾಢ ಶುಕ್ರವಾರ), ಜುಲೈ 30 (ಅಮ್ಮನವರ ಜನ್ಮೋತ್ಸವ), ಆಗಸ್ಟ್ 6 (ಆಷಾಢ ಶುಕ್ರವಾರ)ರಂದು ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಮಾಡಿ ಚಾಮುಂಡೇಶ್ವರಿಯನ್ನು ಆರಾಧಿಸಲಾಗುತ್ತದೆ’ ಎಂದು ಅವರು ಹೇಳಿದರು.</p>.<p>‘ಉಳಿದ ದಿನಗಳಂದು ದೇಗುಲದಲ್ಲಿ ಎಂದಿನ ಪೂಜೆ ನಡೆಯಲಿದೆ. ಕೋವಿಡ್ ನಿಯಮಾವಳಿ ಪಾಲಿಸಿಕೊಂಡು ಭಕ್ತರು ಅಮ್ಮನವರ ದರ್ಶನ ಪಡೆಯಬಹುದು. ಆಷಾಢ ಶುಕ್ರವಾರ ಜಿಲ್ಲಾಡಳಿತದ ಆದೇಶದಂತೆ ಸಾರ್ವಜನಿಕರಿಗೆ ದರ್ಶನದ ಅವಕಾಶವಿರಲ್ಲ’ ಎಂದು ದೀಕ್ಷಿತ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಶುಕ್ರವಾರ ಆಷಾಢ ಅಮಾವಾಸ್ಯೆ ಆಚರಿಸಲಾಯಿತು.</p>.<p>ನಸುಕಿನ 5.30ಕ್ಕೆ ನಾಡದೇವತೆಗೆ ವಿಶೇಷ ಪೂಜೆ, ಅಭಿಷೇಕ ಮಾಡಲಾಯಿತು. ಬೆಳಿಗ್ಗೆ 7.30ರ ವೇಳೆಗೆ ಮಹಾ ಮಂಗಳಾರತಿ ನಡೆಯಿತು.</p>.<p>ದೇಗುಲದ ಪ್ರಾಂಗಣದಲ್ಲೇ ದೇವಾಲಯದ ಅರ್ಚಕರು ಉತ್ಸವ ಮೂರ್ತಿಯ ಮೆರವಣಿಗೆ ಮಾಡಿದರು. 7.45ರ ವೇಳೆಗೆ ಕೋವಿಡ್ ಲಾಕ್ಡೌನ್ ನಿಯಮಾವಳಿಯಂತೆ ದೇಗುಲದ ಬಾಗಿಲಿಗೆ ಬೀಗ ಹಾಕಲಾಯಿತು.</p>.<p>ಸಂಜೆಯೂ ದೇವಿಗೆ ವಿಶೇಷ ಪೂಜೆಗೈದು, ಮಹಾಮಂಗಳಾರತಿ ಅರ್ಪಿಸಲಾಯಿತು.</p>.<p>ಜಿಲ್ಲಾಡಳಿತ ಆಷಾಢ ಅಮಾವಾಸ್ಯೆಯಂದು ಚಾಮುಂಡೇಶ್ವರಿಯ ದರ್ಶನವನ್ನು ಸಾರ್ವಜನಿಕರಿಗೆ ನಿರ್ಬಂಧಿಸಿದ್ದರೂ; ಅಸಂಖ್ಯಾತ ಭಕ್ತರು ಚಾಮುಂಡಿ ಬೆಟ್ಟಕ್ಕೆ ದೇವಿ ದರ್ಶನ ಪಡೆಯಲಿಕ್ಕಾಗಿ ನಸುಕಿನಲ್ಲೇ ದೌಡಾಯಿಸಿದ್ದರು.</p>.<p>ಜಿಲ್ಲಾಡಳಿತದ ಆದೇಶದಂತೆ ಪೊಲೀಸರು ಬೆಟ್ಟ ಪ್ರವೇಶಿಸುವ ಎಲ್ಲ ರಸ್ತೆಗಳಲ್ಲೂ ನಾಕಾಬಂದಿ ಹಾಕಿದ್ದರು. ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಯಾರೊಬ್ಬರು ಬೆಟ್ಟ ಪ್ರವೇಶಿಸದಂತೆ ಕಾವಲು ಕಾದ ಚಿತ್ರಣ ಶುಕ್ರವಾರ ದಿನವಿಡಿ ಗೋಚರಿಸಿತು.</p>.<p>ಆಷಾಢ ಇಂದಿನಿಂದ: ‘ಆಷಾಢ ಮಾಸ ಶನಿವಾರದಿಂದ ಆರಂಭ. ಶಕ್ತಿ ದೇವತೆ ಆರಾಧನೆಯ ಪುಣ್ಯ ಕಾಲವಿದು. ಈ ತಿಂಗಳಲ್ಲಿ ಚಾಮುಂಡೇಶ್ವರಿಯ ಆರಾಧನೆಯಿಂದ ಭಕ್ತರ ಸಕಲ ಇಷ್ಟಾರ್ಥ ನೆರವೇರಲಿವೆ’ ಎಂದು ದೇಗುಲದ ಪ್ರಧಾನ ಅರ್ಚಕ ಎನ್.ಶಶಿಶೇಖರ ದೀಕ್ಷಿತ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಆಷಾಢ ಮಾಸದಲ್ಲಿ ದೇವಿಗೆ ನಿತ್ಯವೂ ಎಂದಿನಂತೆ ಅಭಿಷೇಕ, ವಿಶೇಷ ಪೂಜೆ ಮಾಡುತ್ತೇವೆ. ಜುಲೈ 16, 23 (ಆಷಾಢ ಶುಕ್ರವಾರ), ಜುಲೈ 30 (ಅಮ್ಮನವರ ಜನ್ಮೋತ್ಸವ), ಆಗಸ್ಟ್ 6 (ಆಷಾಢ ಶುಕ್ರವಾರ)ರಂದು ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಮಾಡಿ ಚಾಮುಂಡೇಶ್ವರಿಯನ್ನು ಆರಾಧಿಸಲಾಗುತ್ತದೆ’ ಎಂದು ಅವರು ಹೇಳಿದರು.</p>.<p>‘ಉಳಿದ ದಿನಗಳಂದು ದೇಗುಲದಲ್ಲಿ ಎಂದಿನ ಪೂಜೆ ನಡೆಯಲಿದೆ. ಕೋವಿಡ್ ನಿಯಮಾವಳಿ ಪಾಲಿಸಿಕೊಂಡು ಭಕ್ತರು ಅಮ್ಮನವರ ದರ್ಶನ ಪಡೆಯಬಹುದು. ಆಷಾಢ ಶುಕ್ರವಾರ ಜಿಲ್ಲಾಡಳಿತದ ಆದೇಶದಂತೆ ಸಾರ್ವಜನಿಕರಿಗೆ ದರ್ಶನದ ಅವಕಾಶವಿರಲ್ಲ’ ಎಂದು ದೀಕ್ಷಿತ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>