ಇದಾದ ನಂತರ ಬಸವಣ್ಣ ಅಂತರಜಾತಿ ವಿವಾಹದ ಮೂಲಕ ಅಸ್ಪೃಶ್ಯತೆ ತೊಡೆದು ಹಾಕಲು ಯತ್ನಿಸಿದರು. ಅಸ್ಪೃಶ್ಯರನ್ನು ನೋಡುವುದೇ ಪಾಪ ಎನ್ನುವಂತಹ ಕಾಲಘಟ್ಟದಲ್ಲಿ ಬಸವಣ್ಣ ಅವರನ್ನು ನೋಡಿ, ಪದೇ ಪದೇ ನೆನಪಿಸಿಕೊಂಡು, ಅವರೊಂದಿಗೆ ಮಾತನಾಡಿ, ಅವರ ಜತೆ ಸಹಪಂಕ್ತಿ ಭೋಜನ ಮಾಡಿದ್ದು ನಿಜಕ್ಕೂ ಒಂದು ದೊಡ್ಡ ವೈಜ್ಞಾನಿಕ ವಿಧಾನ ಎಂದು ಅವರು ವಿವರಿಸಿದರು.