<p><strong>ಹನಗೋಡು: </strong>ಇಲ್ಲಿನ ತರಕಾರಿ ವ್ಯಾಪಾರಿ ನಾಗರಾಜ್ ಅವರ ಪುತ್ರ ಕಾರ್ತಿಕ್ನನ್ನು (10) ಅಪಹರಿಸಿದ ದುಷ್ಕರ್ಮಿಗಳು ₹ 4 ಲಕ್ಷಕ್ಕೆ ಬೇಡಿಕೆ ಇಟ್ಟು, ನಂತರ ಕೊಲೆ ಮಾಡಿದ್ದಾರೆ. ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.</p>.<p>ಬುಧವಾರ ರಾತ್ರಿ 7.30ರಲ್ಲಿ ಪಟಾಕಿ ತರಲು ಅಂಗಡಿಗೆ ತೆರಳಿದ್ದ ವೇಳೆ ಬಾಲಕನ ಅಪಹರಣವಾಗಿತ್ತು. ರಾತ್ರಿ 8.15ಕ್ಕೆ ಕರೆ ಮಾಡಿದ ಆರೋಪಿಯೊಬ್ಬ ಬಾಲಕನನ್ನು ಬಿಡಲು ₹ 4 ಲಕ್ಷ ನೀಡುವಂತೆ ಆಗ್ರಹಿಸಿದ್ದ. ಆರೋಪಿಗಾಗಿ ಪೊಲೀಸರು ನಾಕಾಬಂದಿ ರಚಿಸಿದ್ದರೂ ಸುಳಿವು ಸಿಕ್ಕಿರಲಿಲ್ಲ.</p>.<p>ಗುರುವಾರ ಬೆಳಿಗ್ಗೆ ಗ್ರಾಮಕ್ಕೆ ಸಮೀಪದ ಕೆರೆಯ ಬಳಿ ಬಾಲಕನ ಶವ ಪತ್ತೆಯಾಯಿತು. ಮೊಬೈಲ್ ಫೋನ್ ಕರೆಯನ್ನು ಆಧರಿಸಿ ಆರೋಪಿ ಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>‘ಬಾಲಕನ ತಂದೆಯು ಆರ್ಥಿಕವಾಗಿ ಸ್ಥಿತಿವಂತರಲ್ಲ. ಅಪಹರಣದ ಉದ್ದೇಶ ಸ್ಪಷ್ಟವಾಗಿಲ್ಲ. ಹಣಕ್ಕಾಗಿ ಒಂದೇ ಕರೆಯನ್ನು ಮಾಡಿರುವುದು ಶಂಕಾಸ್ಪದವಾಗಿದೆ. ವಿಚಾರಣೆಯ ನಂತರವಷ್ಟೇ ಕಾರಣ ತಿಳಿಯಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನಗೋಡು: </strong>ಇಲ್ಲಿನ ತರಕಾರಿ ವ್ಯಾಪಾರಿ ನಾಗರಾಜ್ ಅವರ ಪುತ್ರ ಕಾರ್ತಿಕ್ನನ್ನು (10) ಅಪಹರಿಸಿದ ದುಷ್ಕರ್ಮಿಗಳು ₹ 4 ಲಕ್ಷಕ್ಕೆ ಬೇಡಿಕೆ ಇಟ್ಟು, ನಂತರ ಕೊಲೆ ಮಾಡಿದ್ದಾರೆ. ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.</p>.<p>ಬುಧವಾರ ರಾತ್ರಿ 7.30ರಲ್ಲಿ ಪಟಾಕಿ ತರಲು ಅಂಗಡಿಗೆ ತೆರಳಿದ್ದ ವೇಳೆ ಬಾಲಕನ ಅಪಹರಣವಾಗಿತ್ತು. ರಾತ್ರಿ 8.15ಕ್ಕೆ ಕರೆ ಮಾಡಿದ ಆರೋಪಿಯೊಬ್ಬ ಬಾಲಕನನ್ನು ಬಿಡಲು ₹ 4 ಲಕ್ಷ ನೀಡುವಂತೆ ಆಗ್ರಹಿಸಿದ್ದ. ಆರೋಪಿಗಾಗಿ ಪೊಲೀಸರು ನಾಕಾಬಂದಿ ರಚಿಸಿದ್ದರೂ ಸುಳಿವು ಸಿಕ್ಕಿರಲಿಲ್ಲ.</p>.<p>ಗುರುವಾರ ಬೆಳಿಗ್ಗೆ ಗ್ರಾಮಕ್ಕೆ ಸಮೀಪದ ಕೆರೆಯ ಬಳಿ ಬಾಲಕನ ಶವ ಪತ್ತೆಯಾಯಿತು. ಮೊಬೈಲ್ ಫೋನ್ ಕರೆಯನ್ನು ಆಧರಿಸಿ ಆರೋಪಿ ಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>‘ಬಾಲಕನ ತಂದೆಯು ಆರ್ಥಿಕವಾಗಿ ಸ್ಥಿತಿವಂತರಲ್ಲ. ಅಪಹರಣದ ಉದ್ದೇಶ ಸ್ಪಷ್ಟವಾಗಿಲ್ಲ. ಹಣಕ್ಕಾಗಿ ಒಂದೇ ಕರೆಯನ್ನು ಮಾಡಿರುವುದು ಶಂಕಾಸ್ಪದವಾಗಿದೆ. ವಿಚಾರಣೆಯ ನಂತರವಷ್ಟೇ ಕಾರಣ ತಿಳಿಯಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>