ಮುಂಗಾರು ಮಳೆ ತಾಲ್ಲೂಕಿನಾದ್ಯಂತ ಉತ್ತಮ ಆರಂಭ ಕಂಡಿದ್ದರಿಂದ ವಿವಿಧ ಬೆಳೆಗೆ ಅನುಕೂಲವಾಗಿದ್ದು, ತಂಬಾಕು ಹೆಚ್ಚಿದೆ. ಕೊಯ್ಲು ನಡೆದಿದ್ದು, ಇದೇ ಭೂಮಿಯಲ್ಲಿ ರಾಗಿ, ಅಲಸಂದೆ ಇನ್ನಿತರ ಬೆಳೆ ಬೆಳೆಯಲು ರೈತರು ಸಿದ್ಧತೆ ನಡೆಸಿದ್ದಾರೆ. 8,400 ಹೆಕ್ಟೇರ್ನಲ್ಲಿ ಹಾರಂಗಿ ಜಲಾಶಯದಿಂದ ನೀರಾವರಿ ಸೌಲಭ್ಯ ಬಳಸಿಕೊಂಡು, ಭತ್ತ ಬೆಳೆಯಲು ಸಸಿಮಡಿ ತಯಾರಿಸಲಾಗಿದೆ.