ಮಕ್ಕಳ ಕ್ರಿಯಾಶೀಲತೆಯನ್ನು ಮಾನಸಿಕವಾಗಿ ಸದೃಢಗೊಳಿಸಲು ರಂಗ ಚಟುವಟಿಕೆಗಳ ಜೊತೆಗೆ, ಮಕ್ಕಳಿಂದ ಅಡುಗೆ ಮಾಡಿಸುವುದು, ಹೊಲಿದ ಬಟ್ಟೆಯನ್ನು ಬಿಡಿಸುವುದು, ವಿಡಿಯೋ ಮೇಕಿಂಗ್, ರೈತರೊಂದಿಗೆ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು, ಆಲೆ ಮನೆಗೆ ಭೇಟಿ ನೀಡಿ ಕಬ್ಬಿನ ಹಾಲಿನಿಂದ ಬೆಲ್ಲ ತಯಾರಾಗುವ ಬಗ್ಗೆ ತಿಳಿದುಕೊಳ್ಳವುದು, ಸೈಕಲ್ ರಿಪೇರಿ ಮಾಡುವುದು ಇತ್ಯಾದಿ ಚಟುವಟಿಕೆಗಳು ನಡೆಯಲಿವೆ. ಇಂತಹ ಚಿಣ್ಣರ ಮೇಳದ ಸೊಬಗನ್ನು ಮೈಸೂರಿಗರು ಕಣ್ತುಂಬಿಕೊಳ್ಳಬಹುದಾಗಿದೆ.