‘ಜಿಲ್ಲೆಯ ಬಹುತೇಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಇನ್ನೂ ಚುನಾಯಿತ ನಿರ್ದೇಶಕರ ಆಡಳಿತ ಮಂಡಳಿಯಿಲ್ಲ. ಮೊದಲು ಈ ಸೊಸೈಟಿಗಳಿಗೆ ಚುನಾವಣೆ ನಡೆಸಲಿ. ನಂತರ ಒಕ್ಕೂಟಕ್ಕೆ ಚುನಾವಣೆ ನಡೆಸಲಿ. ಇದೆಲ್ಲದಕ್ಕೂ ಮೊದಲು ಕೋವಿಡ್–19 ಮುಕ್ತವಾಗಲಿ. ಕೊರೊನಾ ವೈರಸ್ ಸೋಂಕು ಹಬ್ಬುತ್ತಿರುವ ನಡುವೆಯೇ ಚುನಾವಣೆ ನಡೆಸಿದರೆ, ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ’ ಎಂದು ಮಹದೇವಸ್ವಾಮಿ ಹೇಳಿದರು.