ಇಲವಾಲದ ಮಾದಗಳ್ಳಿ ಗ್ರಾಮದ ಬಿ.ಭೈರಪ್ಪ ಅವರ ನಾಲ್ಕು ಎಕರೆ ಭೂಮಿಯನ್ನು ಖರೀದಿಸುವಾಗ ನಾರಾಯಣಗೌಡ ಹಾಗೂ ಪ್ರದೀಪ್ಕುಮಾರ್ ಮನೆ ನಿರ್ಮಿಸಿಕೊಡುವುದಾಗಿ ಒಪ್ಪಂದ ಪತ್ರ ಮಾಡಿಕೊಂಡಿದ್ದರು. ಇದಕ್ಕಾಗಿ ಅವರು ಭದ್ರತೆಯಾಗಿ ₹ 1.97 ಕೋಟಿ ಮೊತ್ತದ ಎರಡು ಚೆಕ್ಗಳು ಹಾಗೂ ₹ 1.69 ಲಕ್ಷ ಮೊತ್ತದ ಒಂದು ಚೆಕ್ ಕೊಟ್ಟಿದ್ದರು. ಆದರೆ, ಮನೆ ನಿರ್ಮಿಸಿಕೊಟ್ಟಿರಲಿಲ್ಲ. ಚೆಕ್ ಸಹ ಬೌನ್ಸ್ ಆಗಿತ್ತು.