ಇಲ್ಲಿರುವ ‘ಚೀತಾ’ ಗೊಂಬೆಯನ್ನು ‘ಟ್ಯಾಕ್ಸಿಡರ್ಮಿ’ ಕಲೆಯಲ್ಲಿ ಸಿದ್ಧಪಡಿಸಲಾಗಿದೆ. ಇದು ಭಾರತದ್ದೇ ಅಥವಾ ಆಫ್ರಿಕಾದ ಚೀತಾವೇ ಎಂಬುದು ಸ್ಪಷ್ಟವಾಗಿಲ್ಲ. ಈ ಗೊಂಬೆಯನ್ನು 40ರ ದಶಕದಲ್ಲಿ ನಗರದಲ್ಲಿ ನೆಲೆಸಿದ್ದ ‘ಟ್ಯಾಕ್ಸಿಡೆರ್ಮಿ’ ತಜ್ಞ ವ್ಯಾನ್ ಈಗನ್, ಚಾಮರಾಜೇಂದ್ರ ಮೃಗಾಲಯದಲ್ಲಿ ಮೃತಪಟ್ಟಿದ್ದ ಚೀತಾದ ಚರ್ಮದಿಂದ ತಯಾರಿಸಿದ್ದರೆನ್ನಲಾಗಿದೆ.