<p>ಮೈಸೂರು: ಪಾಲಿಕೆಯಿಂದ ಬಾಕಿಯಿರುವ ಹಣ ಶೀಘ್ರ ಬಿಡುಗಡೆ ಮಾಡುವಂತೆ ಒತ್ತಡ ಹೇರಲು ಗುತ್ತಿಗೆದಾರರು ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದಾರೆ.</p>.<p>ಪಾಲಿಕೆಯಿಂದ ಗುತ್ತಿಗೆದಾರರಿಗೆ ₹ 130 ಕೋಟಿ ಬಾಕಿಯಿದೆ. ಅದನ್ನು ನೀಡುವಂತೆ ಹಲವು ಸಲ ಮನವಿ ಮಾಡಿದ್ದರೂ, ಬಿಡುಗಡೆ ಆಗಿಲ್ಲ. ಇದರಿಂದ ಶನಿವಾರದಿಂದ ಕೆಲಸ ನಿಲ್ಲಿಸಿದ್ದಾರೆ.</p>.<p>‘ಪಾಲಿಕೆಯು ಗುತ್ತಿಗೆದಾರರಿಗೆ ನೀಡಬೇಕಿರುವ ಹಣವನ್ನು 2018 ರಿಂದಲೂ ಬಾಕಿ ಉಳಿಸಿಕೊಂಡಿದೆ. ಹಲವು ಸಲ ಮನವಿ ಮಾಡಿದರೂ ಬಾಕಿ ಬಿಡುಗಡೆಮಾಡಿಲ್ಲ’ ಎಂದು ಪಾಲಿಕೆ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ವೆಂಕಟಪ್ಪ ತಿಳಿಸಿದ್ಧಾರೆ.</p>.<p>‘₹ 130 ಕೋಟಿಯಲ್ಲಿ ಕೇವಲ ₹ 6 ಕೋಟಿ ನೀಡುವುದಾಗಿ ಪಾಲಿಕೆ ಹೇಳಿದೆ. ಆದರೆ ಅಷ್ಟು ಕಡಿಮೆ ಹಣ ನೀಡಿದರೆ ಸಾಲದು. ಎಲ್ಲ ಬಾಕಿ ನೀಡಬೇಕು’ ಎಂದರು.</p>.<p>‘ಪಾಲಿಕೆಯಡಿ ನಡೆಸುವ ಎಲ್ಲ ಕೆಲಸಗಳನ್ನು ಅ.3 ರಿಂದ ನಿಲ್ಲಿಸಿದ್ದೇವೆ. ಸೋಮವಾರ ಈ ಸಂಬಂಧ ಸಭೆ ನಡೆಸಿ ಮೇಯರ್ ಮತ್ತು ಆಯುಕ್ತರಿಗೆ ಮತ್ತೆ ಮನವಿ ಮಾಡಲಾಗುವುದು. ಆ ಬಳಿಕ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಪಾಲಿಕೆಯಿಂದ ಬಾಕಿಯಿರುವ ಹಣ ಶೀಘ್ರ ಬಿಡುಗಡೆ ಮಾಡುವಂತೆ ಒತ್ತಡ ಹೇರಲು ಗುತ್ತಿಗೆದಾರರು ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದಾರೆ.</p>.<p>ಪಾಲಿಕೆಯಿಂದ ಗುತ್ತಿಗೆದಾರರಿಗೆ ₹ 130 ಕೋಟಿ ಬಾಕಿಯಿದೆ. ಅದನ್ನು ನೀಡುವಂತೆ ಹಲವು ಸಲ ಮನವಿ ಮಾಡಿದ್ದರೂ, ಬಿಡುಗಡೆ ಆಗಿಲ್ಲ. ಇದರಿಂದ ಶನಿವಾರದಿಂದ ಕೆಲಸ ನಿಲ್ಲಿಸಿದ್ದಾರೆ.</p>.<p>‘ಪಾಲಿಕೆಯು ಗುತ್ತಿಗೆದಾರರಿಗೆ ನೀಡಬೇಕಿರುವ ಹಣವನ್ನು 2018 ರಿಂದಲೂ ಬಾಕಿ ಉಳಿಸಿಕೊಂಡಿದೆ. ಹಲವು ಸಲ ಮನವಿ ಮಾಡಿದರೂ ಬಾಕಿ ಬಿಡುಗಡೆಮಾಡಿಲ್ಲ’ ಎಂದು ಪಾಲಿಕೆ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ವೆಂಕಟಪ್ಪ ತಿಳಿಸಿದ್ಧಾರೆ.</p>.<p>‘₹ 130 ಕೋಟಿಯಲ್ಲಿ ಕೇವಲ ₹ 6 ಕೋಟಿ ನೀಡುವುದಾಗಿ ಪಾಲಿಕೆ ಹೇಳಿದೆ. ಆದರೆ ಅಷ್ಟು ಕಡಿಮೆ ಹಣ ನೀಡಿದರೆ ಸಾಲದು. ಎಲ್ಲ ಬಾಕಿ ನೀಡಬೇಕು’ ಎಂದರು.</p>.<p>‘ಪಾಲಿಕೆಯಡಿ ನಡೆಸುವ ಎಲ್ಲ ಕೆಲಸಗಳನ್ನು ಅ.3 ರಿಂದ ನಿಲ್ಲಿಸಿದ್ದೇವೆ. ಸೋಮವಾರ ಈ ಸಂಬಂಧ ಸಭೆ ನಡೆಸಿ ಮೇಯರ್ ಮತ್ತು ಆಯುಕ್ತರಿಗೆ ಮತ್ತೆ ಮನವಿ ಮಾಡಲಾಗುವುದು. ಆ ಬಳಿಕ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>