<p><strong>ಮೈಸೂರು: </strong>ಮೈಸೂರು ನಗರದ ಅಭಿವೃದ್ಧಿಗಾಗಿ ಆಸ್ತಿ ತೆರಿಗೆ ಪಾವತಿಸುವುದು ಅವಶ್ಯಕವಾಗಿದೆ. ಸರಿಯಾದ ಸಮಯಕ್ಕೆ ಪಾವತಿಸಿ ಅಭಿವೃದ್ಧಿಗೆ ಕೈಜೋಡಿಸುವಂತೆ ಶಾಸಕ ಜಿ.ಟಿ.ದೇವೇಗೌಡ ಮನವಿ ಮಾಡಿದರು.</p>.<p>ಸಂಪನ್ಮೂಲ ಕ್ರೋಡೀಕರಿಸುವ ನಿಟ್ಟಿನಲ್ಲಿ ಪಾಲಿಕೆ ವಲಯ ಕಚೇರಿ–3 ವ್ಯಾಪ್ತಿಯ ವಾರ್ಡ್ ಸಂಖ್ಯೆ 58ರಲ್ಲಿ ಶನಿವಾರ ಆಯೋಜಿಸಿದ್ದ ‘ಪಾಲಿಕೆ ನಡೆ ಜನತೆ ಕಡೆ’ ಆಸ್ತಿ ತೆರಿಗೆ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ನಗರದಲ್ಲಿ ಹಲವೆಡೆ ಒಳಚರಂಡಿ ನಿರ್ಮಾಣವಾಗಿಲ್ಲ. ಖಾಲಿ ನಿವೇಶನಗಳಲ್ಲಿ ಗಿಡಗಳು ಬೆಳೆದಿದ್ದು, ಸ್ವಚ್ಛತೆಯೇ ಇಲ್ಲ. ಉದ್ಯಾನ ಅಭಿವೃದ್ಧಿ ಆಗಿಲ್ಲ. ಕುಡಿಯುವ ನೀರಿನ ಸಮಸ್ಯೆ ಇದೆ. ಹೀಗಾಗಿ, ತೆರಿಗೆ ಪಾವತಿಸಿ, ಕುಂದು ಕೊರತೆ ಸರಿಪಡಿಸಿಕೊಳ್ಳಿ ಎಂದರು.</p>.<p>ಪಾಲಿಕೆಗೆ ಆಸ್ತಿ ತೆರಿಗೆಯೇ ಮೂಲ ಆರ್ಥಿಕ ಸಂಪನ್ಮೂಲವಾಗಿದ್ದು, ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ಆಸ್ತಿ ಮಾಲೀಕರು, ಅನುಬೋಗದಾರರು ಆಸ್ತಿ ತೆರಿಗೆ ಪಾವತಿಸಬೇಕಾಗಿದೆ. ಆಸ್ತಿ ತೆರಿಗೆ ಪಾವತಿಸಲು ಅ.31ರ ವರೆಗೆ ಕಾಲಾವಕಾಶ ನೀಡಲಾಗಿದೆ. ನವೆಂಬರ್ನಲ್ಲಿ ಪಾವತಿಸುವ ತೆರಿಗೆದಾರರು ದಂಡ ನೀಡಬೇಕಾಗುತ್ತದೆ ಎಂದರು.</p>.<p>ವಲಯ ಕಚೇರಿ–3 ವ್ಯಾಪ್ತಿಯಲ್ಲಿ ಒಟ್ಟು 29,876 ಆಸ್ತಿಗಳಿರುತ್ತವೆ. ಪ್ರಸಕ್ತ 2020–21 ನೇ ಸಾಲಿಗೆ ಒಟ್ಟು 15,902 ಆಸ್ತಿಗಳಿಂದ ₹ 10.25 ಕೋಟಿ ಹಾಗೂ 2019–20 ರವರೆಗಿನ 4,127 ಬಾಕಿ ಪ್ರಕರಣಗಳಿಂದ ₹ 2.89 ಕೋಟಿ ಸೇರಿ ಒಟ್ಟು ₹ 13.75 ಕೋಟಿ ವಸೂಲಾಗಿದೆ. ಬಾಕಿ 13,984 ಆಸ್ತಿಗಳಿಂದ ₹ 11.62 ಕೋಟಿ ವಸೂಲಾತಿ ಆಗಬೇಕಾಗಿದೆ.</p>.<p>ವಲಯ ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 3,861 ನಿವೇಶನಗಳಿವೆ. ಕೆಲ ಮಾಲೀಕರು ಹೊರರಾಜ್ಯದಲ್ಲಿ ನೆಲೆಸಿದ್ದು, ಅವರು ಕಂದಾಯ ಪಾವತಿಸಲು ಅನುಕೂಲವಾಗುವಂತೆ ಮೂರು ತಿಂಗಳು ಸಾರ್ವತ್ರಿಕ ರಜಾ ದಿನಗಳಲ್ಲಿ ಆಸ್ತಿ ತೆರಿಗೆ ಪಾವತಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು</p>.<p>ಪಾಲಿಕೆ ಸದಸ್ಯ ಶರತ್ ಕುಮಾರ್, ಪಾಲಿಕೆ ಅಧಿಕಾರಿಗಳಾದ ಶಶಿಕುಮಾರ್, ಸತ್ಯಮೂರ್ತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಮೈಸೂರು ನಗರದ ಅಭಿವೃದ್ಧಿಗಾಗಿ ಆಸ್ತಿ ತೆರಿಗೆ ಪಾವತಿಸುವುದು ಅವಶ್ಯಕವಾಗಿದೆ. ಸರಿಯಾದ ಸಮಯಕ್ಕೆ ಪಾವತಿಸಿ ಅಭಿವೃದ್ಧಿಗೆ ಕೈಜೋಡಿಸುವಂತೆ ಶಾಸಕ ಜಿ.ಟಿ.ದೇವೇಗೌಡ ಮನವಿ ಮಾಡಿದರು.</p>.<p>ಸಂಪನ್ಮೂಲ ಕ್ರೋಡೀಕರಿಸುವ ನಿಟ್ಟಿನಲ್ಲಿ ಪಾಲಿಕೆ ವಲಯ ಕಚೇರಿ–3 ವ್ಯಾಪ್ತಿಯ ವಾರ್ಡ್ ಸಂಖ್ಯೆ 58ರಲ್ಲಿ ಶನಿವಾರ ಆಯೋಜಿಸಿದ್ದ ‘ಪಾಲಿಕೆ ನಡೆ ಜನತೆ ಕಡೆ’ ಆಸ್ತಿ ತೆರಿಗೆ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ನಗರದಲ್ಲಿ ಹಲವೆಡೆ ಒಳಚರಂಡಿ ನಿರ್ಮಾಣವಾಗಿಲ್ಲ. ಖಾಲಿ ನಿವೇಶನಗಳಲ್ಲಿ ಗಿಡಗಳು ಬೆಳೆದಿದ್ದು, ಸ್ವಚ್ಛತೆಯೇ ಇಲ್ಲ. ಉದ್ಯಾನ ಅಭಿವೃದ್ಧಿ ಆಗಿಲ್ಲ. ಕುಡಿಯುವ ನೀರಿನ ಸಮಸ್ಯೆ ಇದೆ. ಹೀಗಾಗಿ, ತೆರಿಗೆ ಪಾವತಿಸಿ, ಕುಂದು ಕೊರತೆ ಸರಿಪಡಿಸಿಕೊಳ್ಳಿ ಎಂದರು.</p>.<p>ಪಾಲಿಕೆಗೆ ಆಸ್ತಿ ತೆರಿಗೆಯೇ ಮೂಲ ಆರ್ಥಿಕ ಸಂಪನ್ಮೂಲವಾಗಿದ್ದು, ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ಆಸ್ತಿ ಮಾಲೀಕರು, ಅನುಬೋಗದಾರರು ಆಸ್ತಿ ತೆರಿಗೆ ಪಾವತಿಸಬೇಕಾಗಿದೆ. ಆಸ್ತಿ ತೆರಿಗೆ ಪಾವತಿಸಲು ಅ.31ರ ವರೆಗೆ ಕಾಲಾವಕಾಶ ನೀಡಲಾಗಿದೆ. ನವೆಂಬರ್ನಲ್ಲಿ ಪಾವತಿಸುವ ತೆರಿಗೆದಾರರು ದಂಡ ನೀಡಬೇಕಾಗುತ್ತದೆ ಎಂದರು.</p>.<p>ವಲಯ ಕಚೇರಿ–3 ವ್ಯಾಪ್ತಿಯಲ್ಲಿ ಒಟ್ಟು 29,876 ಆಸ್ತಿಗಳಿರುತ್ತವೆ. ಪ್ರಸಕ್ತ 2020–21 ನೇ ಸಾಲಿಗೆ ಒಟ್ಟು 15,902 ಆಸ್ತಿಗಳಿಂದ ₹ 10.25 ಕೋಟಿ ಹಾಗೂ 2019–20 ರವರೆಗಿನ 4,127 ಬಾಕಿ ಪ್ರಕರಣಗಳಿಂದ ₹ 2.89 ಕೋಟಿ ಸೇರಿ ಒಟ್ಟು ₹ 13.75 ಕೋಟಿ ವಸೂಲಾಗಿದೆ. ಬಾಕಿ 13,984 ಆಸ್ತಿಗಳಿಂದ ₹ 11.62 ಕೋಟಿ ವಸೂಲಾತಿ ಆಗಬೇಕಾಗಿದೆ.</p>.<p>ವಲಯ ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 3,861 ನಿವೇಶನಗಳಿವೆ. ಕೆಲ ಮಾಲೀಕರು ಹೊರರಾಜ್ಯದಲ್ಲಿ ನೆಲೆಸಿದ್ದು, ಅವರು ಕಂದಾಯ ಪಾವತಿಸಲು ಅನುಕೂಲವಾಗುವಂತೆ ಮೂರು ತಿಂಗಳು ಸಾರ್ವತ್ರಿಕ ರಜಾ ದಿನಗಳಲ್ಲಿ ಆಸ್ತಿ ತೆರಿಗೆ ಪಾವತಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು</p>.<p>ಪಾಲಿಕೆ ಸದಸ್ಯ ಶರತ್ ಕುಮಾರ್, ಪಾಲಿಕೆ ಅಧಿಕಾರಿಗಳಾದ ಶಶಿಕುಮಾರ್, ಸತ್ಯಮೂರ್ತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>