<p><strong>ಮೈಸೂರು</strong>: ಕೊರೊನಾ ವೈರಸ್ ಸೋಂಕು ಹರಡುವಿಕೆಯ ಪ್ರಮಾಣ ಜಿಲ್ಲೆಯಲ್ಲಿ ಪ್ರಸ್ತುತ ಇಳಿಮುಖದತ್ತ ಸಾಗಿದೆ. ಆದರೆ ಸಾವಿನ ದಾಖಲು ಪ್ರಮಾಣ ಮಾತ್ರ ಯಥಾಸ್ಥಿತಿ ಮುಂದುವರೆದಿದೆ. ಎರಡಂಕಿಯ ಕೆಳಗಿಳಿದಿಲ್ಲ.</p>.<p>ಜೂನ್ 1ರಿಂದ 12ರವರೆಗೂ ಜಿಲ್ಲಾಡಳಿತ ಪ್ರತಿ ದಿನವೂ ಪ್ರಕಟಿಸಿರುವ ಪ್ರಕಟಣೆಯಲ್ಲಿ 210 ಜನರು ಮೃತಪಟ್ಟಿದ್ದಾರೆ ಎಂಬುದನ್ನು ತಿಳಿಸಿದೆ.</p>.<p>ಗುರುವಾರದ (ಜೂನ್ 10) ಪ್ರಕಟಣೆಯಲ್ಲಿ 18 ಜನರ ಸಾವು ಘೋಷಿಸಿದ್ದು, ಇದರಲ್ಲಿ ಐವರಷ್ಟೇ ಜೂನ್ 1, 2ರಂದು ಮೃತಪಟ್ಟಿರುವುದು. ಉಳಿದ 13 ಜನರು ಮೇ ತಿಂಗಳಲ್ಲಿ ಮೃತಪಟ್ಟಿದ್ದಾರೆ ಎಂಬುದು ನಮೂದಾಗಿದೆ.</p>.<p>ಶುಕ್ರವಾರದ (ಜೂನ್ 11) ಪ್ರಕಟಣೆಯಲ್ಲಿ 20 ಜನರ ಸಾವು ಘೋಷಣೆಯಾಗಿದೆ. ಇದರಲ್ಲಿ 13 ಜನರು ಜೂನ್ 4, 5, 6, 7, 8ರಂದು ಮೃತಪಟ್ಟಿದ್ದರೆ, ಉಳಿದ ಏಳು ಮಂದಿ ಮೇ ತಿಂಗಳ ಕೊನೆ ವಾರದಲ್ಲಿ ಮೃತಪಟ್ಟಿದ್ದಾರೆ ಎಂಬುದನ್ನು ಜಿಲ್ಲಾಡಳಿತವೇ ಸ್ಪಷ್ಟಪಡಿಸಿದೆ.</p>.<p>ಶನಿವಾರದ (ಜೂನ್ 12) ಪ್ರಕಟಣೆಯಲ್ಲೂ 20 ಜನರ ಸಾವಿನ ಮಾಹಿತಿ ಪ್ರಕಟಗೊಂಡಿದೆ. ಇದರಲ್ಲೂ ಮೇ ತಿಂಗಳಲ್ಲಿ ಮೃತಪಟ್ಟ ಇಬ್ಬರ ಮಾಹಿತಿ ನೀಡಿದ್ದರೆ, ಉಳಿದ 18 ಜನರು ಜೂನ್ 1ರಿಂದ 9ರ ನಡುವಿನ ಅವಧಿಯಲ್ಲಿ ಮೃತಪಟ್ಟಿದ್ದಾರೆ.</p>.<p>ಮೇ ತಿಂಗಳಲ್ಲಿ ಮೃತಪಟ್ಟವರ ಮಾಹಿತಿಯನ್ನು ಇದೀಗ ಪ್ರಕಟಿಸಲಾಗುತ್ತಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಸಹ ಜಿಲ್ಲೆಯಲ್ಲಿ ಕೋವಿಡ್ನಿಂದ ಮೃತಪಟ್ಟವರ ಮಾಹಿತಿಯನ್ನು ಜಿಲ್ಲಾಡಳಿತವೇ ಮುಚ್ಚಿಡುತ್ತಿದೆ ಎಂದು ದಾಖಲೆ ಸಮೇತ ಆರೋಪಿಸಿದ್ದರು. ಇದಕ್ಕೆ ಹಲವರು ದನಿಗೂಡಿಸಿದ್ದರು.</p>.<p>ಜೂನ್ ತಿಂಗಳಲ್ಲೂ ಕೋವಿಡ್ನಿಂದ ಮರಣ ಹೊಂದುತ್ತಿರುವವರ ಸಂಖ್ಯೆ ಹೆಚ್ಚಿರುವುದು ನಗರವೂ ಸೇರಿದಂತೆ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಪ್ರಸ್ತುತವೂ ಕೋವಿಡ್ ಬಾಧಿತರಾಗಿರುವ 13,411 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>‘ಮೇ ತಿಂಗಳಲ್ಲಿ ಮೃತಪಟ್ಟಿದ್ದ ಕೋವಿಡ್ ರೋಗಿಗಳ ಮಾಹಿತಿ<br />ಯನ್ನು ಇದೀಗ ಅಪ್ಡೇಟ್ ಮಾಡಲಾಗುತ್ತಿದೆ. ಕೆಲವೊಂದು ತಾಂತ್ರಿಕ ಕಾರಣದಿಂದ ಇದು ವಿಳಂಬವಾಗಿತ್ತು. ಇದರಿಂದ ಸಾವಿನ ಸಂಖ್ಯೆ ಹೆಚ್ಚಿದೆ ಎನ್ನಿಸುತ್ತಿದೆಯಷ್ಟೇ. ಪ್ರಸಕ್ತ ಸನ್ನಿವೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬರುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಡಿಎಂಒ ಡಾ.ಚಿದಂಬರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಚಿತಾಗಾರದಲ್ಲಿ ಹಿಂದಿನಂತೆ ಅಂತ್ಯಕ್ರಿಯೆಗಳು ಹೆಚ್ಚಿನದಾಗಿ ನಡೆಯುತ್ತಿಲ್ಲ. ಆಸ್ಪತ್ರೆಗಳ ಮೇಲೆ ಒತ್ತಡವೂ ಕಡಿಮೆಯಾಗಿದೆ. ಸಾಕಷ್ಟು ಸಂಖ್ಯೆಯ ಆಮ್ಲಜನಕ ಸಹಿತ ಹಾಸಿಗೆಗಳು ಖಾಲಿಯಿವೆ. ಸೋಂಕಿನ ತೀವ್ರತೆ ಏಕಾಏಕಿ ಕಡಿಮೆಯಾಗಲ್ಲ. ಶೀಘ್ರದಲ್ಲೇ ನಿತ್ಯವೂ ದಾಖಲಾಗುವ ಪ್ರಕರಣಗಳ ಸಂಖ್ಯೆ ಮತ್ತಷ್ಟು ಕಡಿಮೆ ಆಗಲಿದೆ’ ಎಂದು ಅವರು<br />ಹೇಳಿದರು.</p>.<p class="Briefhead"><strong>ಗುಣಮುಖರ ಸಂಖ್ಯೆ ಹೆಚ್ಚಳ</strong></p>.<p>ಜೂನ್ 1ರಿಂದ 12ರವರೆಗೂ ಜಿಲ್ಲೆಯಲ್ಲಿ 13,730 ಜನರಿಗೆ ಹೊಸದಾಗಿ ಸೋಂಕು ತಗುಲಿದ್ದರೆ, 15,194 ಜನರು ಗುಣಮುಖರಾಗಿದ್ದಾರೆ. 13,411 ಜನರು ಕೋವಿಡ್ ಆರೈಕೆ ಕೇಂದ್ರ, ಕೋವಿಡ್ ಹೆಲ್ತ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಹೋಂ ಐಸೋಲೇಷನ್ನಲ್ಲಿ ಐಸೋಲೇಟ್ ಆಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>ಏಪ್ರಿಲ್ ಅಂತ್ಯಕ್ಕೆ 10,775 ಸಕ್ರಿಯ ಪ್ರಕರಣಗಳಿದ್ದರೆ, ಮೇ ಕೊನೆಯಲ್ಲಿ 15,085 ಸಕ್ರಿಯ ಪ್ರಕರಣಗಳಿದ್ದವು. ಜೂನ್ 12ರಂದು ಸಕ್ರಿಯ ಪ್ರಕರಣಗಳ ಸಂಖ್ಯೆ 13,411ರಷ್ಟಿದೆ.</p>.<p>ಏಪ್ರಿಲ್ನಲ್ಲಿ 151 ಜನರು ಕೋವಿಡ್ನಿಂದ ಮೃತಪಟ್ಟಿದ್ದರೆ, ಮೇ ತಿಂಗಳಲ್ಲಿ 420 ಜನರು, ಜೂನ್ 12ರವರೆಗೂ 210 ಜನರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.</p>.<p class="Briefhead">ಮೂರು ದಿನವಷ್ಟೇ ಸಾವಿರಕ್ಕಿಂತ ಕಡಿಮೆ</p>.<p>ಮೈಸೂರು ಜಿಲ್ಲೆಯಲ್ಲಿ ಜೂನ್ 1ರಿಂದ 12ರವರೆಗೂ ನಿತ್ಯವೂ ಒಂದು ಸಾವಿರದ ಆಸುಪಾಸಿನಲ್ಲಿ ಹೊಸ ಕೋವಿಡ್ ಪ್ರಕರಣ ದೃಢಪಡುತ್ತಿವೆ.</p>.<p>ಜೂನ್ 8ರಂದು 974 ಪ್ರಕರಣ ದಾಖಲಾಗಿದ್ದರೆ, 11ರ ಶುಕ್ರವಾರ 817, 12ರ ಶನಿವಾರ 482 ಪ್ರಕರಣ ದೃಢಪಟ್ಟಿವೆ. ಈ ಮೂರು ದಿನವಷ್ಟೇ ಒಂದು ಸಾವಿರಕ್ಕಿಂತ ಕಡಿಮೆ ಪ್ರಕರಣ ದಾಖಲಾಗಿರುವುದು. ಉಳಿದ ಒಂಬತ್ತು ದಿನವೂ ಸಾವಿರಕ್ಕಿಂತ ಹೆಚ್ಚು ಕೋವಿಡ್ ಪ್ರಕರಣ ದೃಢಪಟ್ಟಿವೆ. ಜೂನ್ ತಿಂಗಳಲ್ಲಿ ದಾಖಲಾದ ಪ್ರಕರಣಗಳ ಇದುವರೆಗಿನ ಸರಾಸರಿ 1140ರಷ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಕೊರೊನಾ ವೈರಸ್ ಸೋಂಕು ಹರಡುವಿಕೆಯ ಪ್ರಮಾಣ ಜಿಲ್ಲೆಯಲ್ಲಿ ಪ್ರಸ್ತುತ ಇಳಿಮುಖದತ್ತ ಸಾಗಿದೆ. ಆದರೆ ಸಾವಿನ ದಾಖಲು ಪ್ರಮಾಣ ಮಾತ್ರ ಯಥಾಸ್ಥಿತಿ ಮುಂದುವರೆದಿದೆ. ಎರಡಂಕಿಯ ಕೆಳಗಿಳಿದಿಲ್ಲ.</p>.<p>ಜೂನ್ 1ರಿಂದ 12ರವರೆಗೂ ಜಿಲ್ಲಾಡಳಿತ ಪ್ರತಿ ದಿನವೂ ಪ್ರಕಟಿಸಿರುವ ಪ್ರಕಟಣೆಯಲ್ಲಿ 210 ಜನರು ಮೃತಪಟ್ಟಿದ್ದಾರೆ ಎಂಬುದನ್ನು ತಿಳಿಸಿದೆ.</p>.<p>ಗುರುವಾರದ (ಜೂನ್ 10) ಪ್ರಕಟಣೆಯಲ್ಲಿ 18 ಜನರ ಸಾವು ಘೋಷಿಸಿದ್ದು, ಇದರಲ್ಲಿ ಐವರಷ್ಟೇ ಜೂನ್ 1, 2ರಂದು ಮೃತಪಟ್ಟಿರುವುದು. ಉಳಿದ 13 ಜನರು ಮೇ ತಿಂಗಳಲ್ಲಿ ಮೃತಪಟ್ಟಿದ್ದಾರೆ ಎಂಬುದು ನಮೂದಾಗಿದೆ.</p>.<p>ಶುಕ್ರವಾರದ (ಜೂನ್ 11) ಪ್ರಕಟಣೆಯಲ್ಲಿ 20 ಜನರ ಸಾವು ಘೋಷಣೆಯಾಗಿದೆ. ಇದರಲ್ಲಿ 13 ಜನರು ಜೂನ್ 4, 5, 6, 7, 8ರಂದು ಮೃತಪಟ್ಟಿದ್ದರೆ, ಉಳಿದ ಏಳು ಮಂದಿ ಮೇ ತಿಂಗಳ ಕೊನೆ ವಾರದಲ್ಲಿ ಮೃತಪಟ್ಟಿದ್ದಾರೆ ಎಂಬುದನ್ನು ಜಿಲ್ಲಾಡಳಿತವೇ ಸ್ಪಷ್ಟಪಡಿಸಿದೆ.</p>.<p>ಶನಿವಾರದ (ಜೂನ್ 12) ಪ್ರಕಟಣೆಯಲ್ಲೂ 20 ಜನರ ಸಾವಿನ ಮಾಹಿತಿ ಪ್ರಕಟಗೊಂಡಿದೆ. ಇದರಲ್ಲೂ ಮೇ ತಿಂಗಳಲ್ಲಿ ಮೃತಪಟ್ಟ ಇಬ್ಬರ ಮಾಹಿತಿ ನೀಡಿದ್ದರೆ, ಉಳಿದ 18 ಜನರು ಜೂನ್ 1ರಿಂದ 9ರ ನಡುವಿನ ಅವಧಿಯಲ್ಲಿ ಮೃತಪಟ್ಟಿದ್ದಾರೆ.</p>.<p>ಮೇ ತಿಂಗಳಲ್ಲಿ ಮೃತಪಟ್ಟವರ ಮಾಹಿತಿಯನ್ನು ಇದೀಗ ಪ್ರಕಟಿಸಲಾಗುತ್ತಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಸಹ ಜಿಲ್ಲೆಯಲ್ಲಿ ಕೋವಿಡ್ನಿಂದ ಮೃತಪಟ್ಟವರ ಮಾಹಿತಿಯನ್ನು ಜಿಲ್ಲಾಡಳಿತವೇ ಮುಚ್ಚಿಡುತ್ತಿದೆ ಎಂದು ದಾಖಲೆ ಸಮೇತ ಆರೋಪಿಸಿದ್ದರು. ಇದಕ್ಕೆ ಹಲವರು ದನಿಗೂಡಿಸಿದ್ದರು.</p>.<p>ಜೂನ್ ತಿಂಗಳಲ್ಲೂ ಕೋವಿಡ್ನಿಂದ ಮರಣ ಹೊಂದುತ್ತಿರುವವರ ಸಂಖ್ಯೆ ಹೆಚ್ಚಿರುವುದು ನಗರವೂ ಸೇರಿದಂತೆ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಪ್ರಸ್ತುತವೂ ಕೋವಿಡ್ ಬಾಧಿತರಾಗಿರುವ 13,411 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>‘ಮೇ ತಿಂಗಳಲ್ಲಿ ಮೃತಪಟ್ಟಿದ್ದ ಕೋವಿಡ್ ರೋಗಿಗಳ ಮಾಹಿತಿ<br />ಯನ್ನು ಇದೀಗ ಅಪ್ಡೇಟ್ ಮಾಡಲಾಗುತ್ತಿದೆ. ಕೆಲವೊಂದು ತಾಂತ್ರಿಕ ಕಾರಣದಿಂದ ಇದು ವಿಳಂಬವಾಗಿತ್ತು. ಇದರಿಂದ ಸಾವಿನ ಸಂಖ್ಯೆ ಹೆಚ್ಚಿದೆ ಎನ್ನಿಸುತ್ತಿದೆಯಷ್ಟೇ. ಪ್ರಸಕ್ತ ಸನ್ನಿವೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬರುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಡಿಎಂಒ ಡಾ.ಚಿದಂಬರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಚಿತಾಗಾರದಲ್ಲಿ ಹಿಂದಿನಂತೆ ಅಂತ್ಯಕ್ರಿಯೆಗಳು ಹೆಚ್ಚಿನದಾಗಿ ನಡೆಯುತ್ತಿಲ್ಲ. ಆಸ್ಪತ್ರೆಗಳ ಮೇಲೆ ಒತ್ತಡವೂ ಕಡಿಮೆಯಾಗಿದೆ. ಸಾಕಷ್ಟು ಸಂಖ್ಯೆಯ ಆಮ್ಲಜನಕ ಸಹಿತ ಹಾಸಿಗೆಗಳು ಖಾಲಿಯಿವೆ. ಸೋಂಕಿನ ತೀವ್ರತೆ ಏಕಾಏಕಿ ಕಡಿಮೆಯಾಗಲ್ಲ. ಶೀಘ್ರದಲ್ಲೇ ನಿತ್ಯವೂ ದಾಖಲಾಗುವ ಪ್ರಕರಣಗಳ ಸಂಖ್ಯೆ ಮತ್ತಷ್ಟು ಕಡಿಮೆ ಆಗಲಿದೆ’ ಎಂದು ಅವರು<br />ಹೇಳಿದರು.</p>.<p class="Briefhead"><strong>ಗುಣಮುಖರ ಸಂಖ್ಯೆ ಹೆಚ್ಚಳ</strong></p>.<p>ಜೂನ್ 1ರಿಂದ 12ರವರೆಗೂ ಜಿಲ್ಲೆಯಲ್ಲಿ 13,730 ಜನರಿಗೆ ಹೊಸದಾಗಿ ಸೋಂಕು ತಗುಲಿದ್ದರೆ, 15,194 ಜನರು ಗುಣಮುಖರಾಗಿದ್ದಾರೆ. 13,411 ಜನರು ಕೋವಿಡ್ ಆರೈಕೆ ಕೇಂದ್ರ, ಕೋವಿಡ್ ಹೆಲ್ತ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಹೋಂ ಐಸೋಲೇಷನ್ನಲ್ಲಿ ಐಸೋಲೇಟ್ ಆಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>ಏಪ್ರಿಲ್ ಅಂತ್ಯಕ್ಕೆ 10,775 ಸಕ್ರಿಯ ಪ್ರಕರಣಗಳಿದ್ದರೆ, ಮೇ ಕೊನೆಯಲ್ಲಿ 15,085 ಸಕ್ರಿಯ ಪ್ರಕರಣಗಳಿದ್ದವು. ಜೂನ್ 12ರಂದು ಸಕ್ರಿಯ ಪ್ರಕರಣಗಳ ಸಂಖ್ಯೆ 13,411ರಷ್ಟಿದೆ.</p>.<p>ಏಪ್ರಿಲ್ನಲ್ಲಿ 151 ಜನರು ಕೋವಿಡ್ನಿಂದ ಮೃತಪಟ್ಟಿದ್ದರೆ, ಮೇ ತಿಂಗಳಲ್ಲಿ 420 ಜನರು, ಜೂನ್ 12ರವರೆಗೂ 210 ಜನರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.</p>.<p class="Briefhead">ಮೂರು ದಿನವಷ್ಟೇ ಸಾವಿರಕ್ಕಿಂತ ಕಡಿಮೆ</p>.<p>ಮೈಸೂರು ಜಿಲ್ಲೆಯಲ್ಲಿ ಜೂನ್ 1ರಿಂದ 12ರವರೆಗೂ ನಿತ್ಯವೂ ಒಂದು ಸಾವಿರದ ಆಸುಪಾಸಿನಲ್ಲಿ ಹೊಸ ಕೋವಿಡ್ ಪ್ರಕರಣ ದೃಢಪಡುತ್ತಿವೆ.</p>.<p>ಜೂನ್ 8ರಂದು 974 ಪ್ರಕರಣ ದಾಖಲಾಗಿದ್ದರೆ, 11ರ ಶುಕ್ರವಾರ 817, 12ರ ಶನಿವಾರ 482 ಪ್ರಕರಣ ದೃಢಪಟ್ಟಿವೆ. ಈ ಮೂರು ದಿನವಷ್ಟೇ ಒಂದು ಸಾವಿರಕ್ಕಿಂತ ಕಡಿಮೆ ಪ್ರಕರಣ ದಾಖಲಾಗಿರುವುದು. ಉಳಿದ ಒಂಬತ್ತು ದಿನವೂ ಸಾವಿರಕ್ಕಿಂತ ಹೆಚ್ಚು ಕೋವಿಡ್ ಪ್ರಕರಣ ದೃಢಪಟ್ಟಿವೆ. ಜೂನ್ ತಿಂಗಳಲ್ಲಿ ದಾಖಲಾದ ಪ್ರಕರಣಗಳ ಇದುವರೆಗಿನ ಸರಾಸರಿ 1140ರಷ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>