<p><strong>ಮೈಸೂರು:</strong> ನಾಡಹಬ್ಬ ಮೈಸೂರು ದಸರಾ ಮಹೋತ್ಸವ–2020ರ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿದೆ. ಇದರಲ್ಲಿ ಹತ್ತು ದಿನ ನಡೆಯುವ ದಸರಾ ಕಾರ್ಯಕ್ರಮಗಳ ಪಟ್ಟಿಯ ಜೊತೆಗೆ ಕೋವಿಡ್ ಜಾಗೃತಿಯ ಸಂದೇಶವೂ ಅಡಕಗೊಂಡಿರುವುದು ವಿಶೇಷ.</p>.<p>ಕೋವಿಡ್–19 ಕುರಿತಂತೆ ಹಾಗೂ ಈ ಸೋಂಕು ಜನರಿಗೆ ಹರಡದಂತೆ ಸಮುದಾಯದಲ್ಲಿ ಜಾಗೃತಿ ಮೂಡಿಸಲಿಕ್ಕಾಗಿ ದಸರಾ ಆಮಂತ್ರಣ ಪತ್ರಿಕೆಯಲ್ಲಿ ಒಂದು ಪುಟವನ್ನೇ ಮೀಸಲಿಡಲಾಗಿದೆ. ಇದನ್ನು ಸುಂದರವಾಗಿ ವಿನ್ಯಾಸಗೊಳಿದ್ದು, ಮನಮುಟ್ಟುವ ಜಾಗೃತಿ ಸಂದೇಶಗಳು ಇದರಲ್ಲಿ ಪ್ರಕಟಗೊಂಡಿವೆ.</p>.<p>‘ಇದು ಜೀವ ಉಳಿಸಿಕೊಳ್ಳುವ ವರ್ಷ. ಅಂತರ ಕಾಪಾಡಿಕೊಂಡರೆ ಮುಂದೆ ಬರಲಿದೆ ಹರ್ಷ. ಕನಿಷ್ಠ ಅಂತರ ಪಾಲಿಸೋಣ. ಸರಳ ದಸರಾ ಆಚರಿ ಸೋಣ’ ಎಂಬ ಘೋಷ ವಾಕ್ಯಗಳು ಕೋವಿಡ್ ಜಾಗೃತಿ ಮೂಡಿಸುವ ಪುಟದಲ್ಲಿವೆ.</p>.<p><strong>‘ಕಡ್ಡಾಯವಾಗಿ ಮಾಸ್ಕ್ ಧರಿಸಿ:</strong> ಜೀವನಕ್ಕಿಂತ ಜೀವ ಮುಖ್ಯ. ಜೀವ ಮೊದಲು ಜೀವನ ನಂತರ. ಮಾಸ್ಕ್ ಹಾಕಿಕೊಳ್ಳಿ, ಜೀವ ಉಳಿಸಿಕೊಳ್ಳಿ.</p>.<p class="Subhead"><strong>ಸ್ಯಾನಿಟೈಸರ್ ಬಳಸಿ: </strong>ಆಗಾಗ ಕೈ ತೊಳೆಯಿರಿ. ಅದು ಭವಿಷ್ಯದಲ್ಲಿ ನಿಮ್ಮ ಕೈ ಹಿಡಿಯುತ್ತದೆ.</p>.<p class="Subhead"><strong>ಅಂತರ ಪಾಲಿಸಿ:</strong> ಯಾರ ಕೈ ಕುಲಕಬೇಡಿ. ದೂರದಿಂದಲೇ ಕೈಜೋಡಿಸಿ ನಮಿಸಿ’ ಎಂಬ ಘೋಷ ವಾಕ್ಯಗಳು ದಸರಾ ಆಮಂತ್ರಣ ಪತ್ರಿಕೆಯ ಕೋವಿಡ್ ಜಾಗೃತಿ ಮೂಡಿಸುವ ಪುಟದಲ್ಲಿ ರಾರಾಜಿಸುತ್ತಿವೆ.</p>.<p class="Subhead"><strong>ಸಾಮೂಹಿಕ ನಿರ್ಧಾರ:</strong> ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಒಂದೂವರೆ ತಿಂಗಳ ಹಿಂದೆಯೇ ದಸರಾ ಉನ್ನತಾಧಿಕಾರ ಸಮಿತಿಯ ಸಭೆ ನಡೆದಾಗಲೇ, ಕೋವಿಡ್ ಜಾಗೃತಿ ಮೂಡಿಸುವ ಸಂದೇಶ ದಸರಾ ಆಮಂತ್ರಣ ಪತ್ರಿಕೆಯಲ್ಲಿರಬೇಕು ಎಂಬುದು ನಿರ್ಧರಿತವಾಗಿತ್ತು ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.</p>.<p>ಇದು ಒಬ್ಬಿಬ್ಬರ ಸಲಹೆ, ನಿರ್ಧಾರ ವಲ್ಲ. ಮುಖ್ಯಮಂತ್ರಿ, ಹಿರಿಯ ಸಚಿವರು, ಉನ್ನತ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಸಾಮೂಹಿಕ ನಿರ್ಧಾರ ಎಂಬುದು ಗೊತ್ತಾಗಿದೆ.</p>.<p>‘ಕೋವಿಡ್ ಜೊತೆಗೆ ಬದುಕಬೇಕಿದೆ. ಜೀವ–ಜೀವನವೂ ಮುಖ್ಯ ಎಂದು ಪ್ರಧಾನಿಯವರು ಹೇಳಿ ತಿಂಗಳು ಗತಿಸಿದೆ. ದಸರಾ ಆಚರಣೆ ಬೇಕೋ–ಬೇಡವೋ ಎಂಬ ಚರ್ಚೆಯ ನಡುವೆಯೇ ಸಂಪ್ರದಾಯಕ್ಕೆ ಚ್ಯುತಿಯಾಗದಂತೆ ಸರಳ ದಸರಾ ಆಚರಿಸಲಾಗುತ್ತಿದೆ. ಈ ಸಂದರ್ಭ ಅವಕಾಶ ಸಿಕ್ಕ ಕಡೆ ಕೋವಿಡ್ ಜಾಗೃತಿ ಮೂಡಿಸುವ ಯತ್ನವನ್ನು ನಡೆಸಲಾಗುತ್ತಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ನಾಡಹಬ್ಬ ಮೈಸೂರು ದಸರಾ ಮಹೋತ್ಸವ–2020ರ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿದೆ. ಇದರಲ್ಲಿ ಹತ್ತು ದಿನ ನಡೆಯುವ ದಸರಾ ಕಾರ್ಯಕ್ರಮಗಳ ಪಟ್ಟಿಯ ಜೊತೆಗೆ ಕೋವಿಡ್ ಜಾಗೃತಿಯ ಸಂದೇಶವೂ ಅಡಕಗೊಂಡಿರುವುದು ವಿಶೇಷ.</p>.<p>ಕೋವಿಡ್–19 ಕುರಿತಂತೆ ಹಾಗೂ ಈ ಸೋಂಕು ಜನರಿಗೆ ಹರಡದಂತೆ ಸಮುದಾಯದಲ್ಲಿ ಜಾಗೃತಿ ಮೂಡಿಸಲಿಕ್ಕಾಗಿ ದಸರಾ ಆಮಂತ್ರಣ ಪತ್ರಿಕೆಯಲ್ಲಿ ಒಂದು ಪುಟವನ್ನೇ ಮೀಸಲಿಡಲಾಗಿದೆ. ಇದನ್ನು ಸುಂದರವಾಗಿ ವಿನ್ಯಾಸಗೊಳಿದ್ದು, ಮನಮುಟ್ಟುವ ಜಾಗೃತಿ ಸಂದೇಶಗಳು ಇದರಲ್ಲಿ ಪ್ರಕಟಗೊಂಡಿವೆ.</p>.<p>‘ಇದು ಜೀವ ಉಳಿಸಿಕೊಳ್ಳುವ ವರ್ಷ. ಅಂತರ ಕಾಪಾಡಿಕೊಂಡರೆ ಮುಂದೆ ಬರಲಿದೆ ಹರ್ಷ. ಕನಿಷ್ಠ ಅಂತರ ಪಾಲಿಸೋಣ. ಸರಳ ದಸರಾ ಆಚರಿ ಸೋಣ’ ಎಂಬ ಘೋಷ ವಾಕ್ಯಗಳು ಕೋವಿಡ್ ಜಾಗೃತಿ ಮೂಡಿಸುವ ಪುಟದಲ್ಲಿವೆ.</p>.<p><strong>‘ಕಡ್ಡಾಯವಾಗಿ ಮಾಸ್ಕ್ ಧರಿಸಿ:</strong> ಜೀವನಕ್ಕಿಂತ ಜೀವ ಮುಖ್ಯ. ಜೀವ ಮೊದಲು ಜೀವನ ನಂತರ. ಮಾಸ್ಕ್ ಹಾಕಿಕೊಳ್ಳಿ, ಜೀವ ಉಳಿಸಿಕೊಳ್ಳಿ.</p>.<p class="Subhead"><strong>ಸ್ಯಾನಿಟೈಸರ್ ಬಳಸಿ: </strong>ಆಗಾಗ ಕೈ ತೊಳೆಯಿರಿ. ಅದು ಭವಿಷ್ಯದಲ್ಲಿ ನಿಮ್ಮ ಕೈ ಹಿಡಿಯುತ್ತದೆ.</p>.<p class="Subhead"><strong>ಅಂತರ ಪಾಲಿಸಿ:</strong> ಯಾರ ಕೈ ಕುಲಕಬೇಡಿ. ದೂರದಿಂದಲೇ ಕೈಜೋಡಿಸಿ ನಮಿಸಿ’ ಎಂಬ ಘೋಷ ವಾಕ್ಯಗಳು ದಸರಾ ಆಮಂತ್ರಣ ಪತ್ರಿಕೆಯ ಕೋವಿಡ್ ಜಾಗೃತಿ ಮೂಡಿಸುವ ಪುಟದಲ್ಲಿ ರಾರಾಜಿಸುತ್ತಿವೆ.</p>.<p class="Subhead"><strong>ಸಾಮೂಹಿಕ ನಿರ್ಧಾರ:</strong> ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಒಂದೂವರೆ ತಿಂಗಳ ಹಿಂದೆಯೇ ದಸರಾ ಉನ್ನತಾಧಿಕಾರ ಸಮಿತಿಯ ಸಭೆ ನಡೆದಾಗಲೇ, ಕೋವಿಡ್ ಜಾಗೃತಿ ಮೂಡಿಸುವ ಸಂದೇಶ ದಸರಾ ಆಮಂತ್ರಣ ಪತ್ರಿಕೆಯಲ್ಲಿರಬೇಕು ಎಂಬುದು ನಿರ್ಧರಿತವಾಗಿತ್ತು ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.</p>.<p>ಇದು ಒಬ್ಬಿಬ್ಬರ ಸಲಹೆ, ನಿರ್ಧಾರ ವಲ್ಲ. ಮುಖ್ಯಮಂತ್ರಿ, ಹಿರಿಯ ಸಚಿವರು, ಉನ್ನತ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಸಾಮೂಹಿಕ ನಿರ್ಧಾರ ಎಂಬುದು ಗೊತ್ತಾಗಿದೆ.</p>.<p>‘ಕೋವಿಡ್ ಜೊತೆಗೆ ಬದುಕಬೇಕಿದೆ. ಜೀವ–ಜೀವನವೂ ಮುಖ್ಯ ಎಂದು ಪ್ರಧಾನಿಯವರು ಹೇಳಿ ತಿಂಗಳು ಗತಿಸಿದೆ. ದಸರಾ ಆಚರಣೆ ಬೇಕೋ–ಬೇಡವೋ ಎಂಬ ಚರ್ಚೆಯ ನಡುವೆಯೇ ಸಂಪ್ರದಾಯಕ್ಕೆ ಚ್ಯುತಿಯಾಗದಂತೆ ಸರಳ ದಸರಾ ಆಚರಿಸಲಾಗುತ್ತಿದೆ. ಈ ಸಂದರ್ಭ ಅವಕಾಶ ಸಿಕ್ಕ ಕಡೆ ಕೋವಿಡ್ ಜಾಗೃತಿ ಮೂಡಿಸುವ ಯತ್ನವನ್ನು ನಡೆಸಲಾಗುತ್ತಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>