ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೇನ್ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸಾವು

Last Updated 7 ಏಪ್ರಿಲ್ 2019, 17:54 IST
ಅಕ್ಷರ ಗಾತ್ರ

ಮೈಸೂರು: ಬೈಕ್‌ ಒಂದಕ್ಕೆ ಹಿಂದಿನಿಂದ ಬಂದ ಕ್ರೇನ್‌ ಡಿಕ್ಕಿಯಾಗಿ ಬೈಕ್ ಸವಾರ ತಗಡೂರಿನ ನಿವಾಸಿ ರಂಗಸ್ವಾಮಿ (21) ಮೃತಪಟ್ಟಿದ್ದಾರೆ.

ಇವರು ಇಲ್ಲಿನ ರಿಂಗ್‌ರಸ್ತೆಯ ಪೊಲೀಸ್ ಬಡಾವಣೆ ಬಳಿ ಉತ್ತನಹಳ್ಳಿ ಕಡೆಗೆ ಹೋಗುತ್ತಿದ್ದಾಗ ಪೊಲೀಸ್ ಬಡಾವಣೆಯ ಸುಣ್ಣದಗೂಡು ಹತ್ತಿರ ಹಿಂದಿನಿಂದ ಬಂದ ಕ್ರೇನ್‌ ಡಿಕ್ಕಿ ಹೊಡೆದಿದೆ. ಆದರೆ, ಕ್ರೇನ್‌ ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡ ರಂಗಸ್ವಾಮಿ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸಿದ್ದಾರ್ಥನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT