17ರಂದು ಸಂಜೆ 6 ಗಂಟೆಗೆ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಅ.24ರವರೆಗೆ ನಿತ್ಯ ಎರಡು ಗಂಟೆ ನೃತ್ಯರೂಪಕ, ಕೊಳಲುವಾದನ, ಭಕ್ತಿಗೀತೆ, ಪಂಚವೀಣೆ, ವಚನಗಾಯನ, ದಾಸವಾಣಿ, ರಾಜೇಶ್ ಕೃಷ್ಣನ್ ತಂಡದಿಂದ ಎಸ್ಪಿಬಿ ನುಡಿನಮನ ಸೇರಿದಂತೆ ಹಲವು ಕಾರ್ಯಕ್ರಮ ನಡೆಯಲಿವೆ. ಮೈಸೂರು, ಬೆಂಗಳೂರು, ರಾಯಚೂರು, ಹಾಸನ ತಂಡಗಳು ಕಾರ್ಯಕ್ರಮ ನೀಡಲಿವೆ. ಆಹ್ವಾನ ಪತ್ರಿಕೆಯಲ್ಲೂ ಕೋವಿಡ್ಜಾಗೃತಿ ಮೂಡಿಸಲಾಗಿದೆ.