ಅ.23ರಂದು ಸಂಜೆ 7ರಿಂದ 8 ಗಂಟೆವರೆಗೆ ಮೈಸೂರಿನ ‘ಹೊನ್ನಾರು ಜನಪದ ಗಾಯಕರು’ ತಂಡದ ಡಾ.ಪಿ.ಕೆ.ರಾಜಶೇಖರ್ ಮತ್ತು ಸದಸ್ಯರಿಂದ ಜಾನಪದ ಗಾಯನ ಏರ್ಪಡಿಸಲಾಗಿದೆ. 8ರಿಂದ 9 ಗಂಟೆವರೆಗೆ ಮೈಸೂರಿನ ವಿದ್ವಾನ್ ಶಫೀಕ್ ಖಾನ್ (ಸಿತಾರ್), ವಿದ್ವಾನ್ ಕಾರ್ತಿಕ್ ನಾಗರಾಜ್ (ವಯಲಿನ್) ಮತ್ತು ತಂಡದವರು ಹಿಂದೂಸ್ತಾನಿ–ಕರ್ನಾಟಕ ಶಾಸ್ತ್ರೀಯ ಸಂಗೀತ ಜುಗಲ್ ಬಂದಿ ನಡೆಸಿಕೊಡಲಿದ್ದಾರೆ. ಅ.24ರಂದು ಸಂಜೆ 7ರಿಂದ 9 ಗಂಟೆವರೆಗೆ ಬೆಂಗಳೂರಿನ ವಿದ್ವಾನ್ ಗಿರಿಧರ ಉಡುಪ ಮತ್ತು ತಂಡ ಲಯತರಂಗ ಕಾರ್ಯಕ್ರಮ ಪ್ರಸ್ತುತಪಡಿಸಲಿದೆ.