ವರುಣಾ: ಸಮೀಪದ ಸಿದ್ದರಾಮನಹುಂಡಿಗೆ ಶುಕ್ರವಾರ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಭೇಟಿ ನೀಡಿದರು.
ಕೆಲ ದಿನಗಳ ಹಿಂದೆ ತಮ್ಮ ಸಹೋದರಿ ಜ್ಯೋತಿ ಅವರ ಪತಿ ಕರಿಯಪ್ಪ ನಿಧನರಾಗಿದ್ದರು. ಅವರ ಸಮಾಧಿಯ ಬಳಿ ತೆರಳಿ ಮಾಲಾರ್ಪಣೆ ಮಾಡಿದರು. ನಂತರ ಸಹೋದರಿಯ ಮನೆಗೆ ಬಂದು ಸಾಂತ್ವನ ಹೇಳಿ, ಕುಶಲೋಪರಿ ವಿಚಾರಿಸಿದರು.
ಸುದ್ದಿಗಾರ ರೊಂದಿಗೆ ಮಾತನಾಡಿ, ‘ಅತೃಪ್ತ ಶಾಸಕರಿಗೂ ನಮಗೂ ಸಂಬಂಧವಿಲ್ಲ. ಹಿಂದಿನ ಸರ್ಕಾರ ಪತನದಲ್ಲಿ ನಮ್ಮ ಸರ್ಕಾರದ ಪಾತ್ರವಿಲ್ಲ’ ಎಂದರು.