‘ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಮೀನಾಕ್ಷಿ, ಮೇ 30ರಂದು ರಕ್ತದೊತ್ತಡದ ಏರುಪೇರಿನಿಂದಾಗಿ ಮನೆಯಲ್ಲಿ ಹಠಾತ್ತನೇ ಪ್ರಜ್ಞಾಶೂನ್ಯರಾದರು. ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ವೈದ್ಯರ ತಂಡ ಇವರ ಮಿದುಳು ವಿಫಲಗೊಂಡಿದ್ದಾಗಿ ಘೋಷಿಸಿತು. ನಂತರ, ಇವರ ಕಾರ್ನಿಯಾ ಹಾಗೂ ಯಕೃತ್ತು (ಲಿವರ್)ನ್ನು ಇಬ್ಬರು ರೋಗಿಗಳಿಗೆ ಯಶಸ್ವಿಯಾಗಿ ಜೋಡಿಸಲಾಯಿತು’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.