ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರ ಬಾಳಿಗೆ ಬೆಳಕಾದ ಅಂಗಾಂಗ ದಾನ

Last Updated 7 ಜೂನ್ 2019, 19:45 IST
ಅಕ್ಷರ ಗಾತ್ರ

ಮೈಸೂರು: ಮಿದುಳು ನಿಷ್ಕ್ರಿಯಗೊಂಡಿದ್ದ, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ಮೀನಾಕ್ಷಿ ಮಹದೇವಸ್ವಾಮಿ (65) ಅವರ ಅಂಗಾಂಗಳನ್ನು ಅಗತ್ಯವಿದ್ದ ರೋಗಿಗಳಿಗೆ ಜೋಡಿಸಲಾಗಿದೆ ಎಂದು ಅಪೊಲೊ ಆಸ್ಪತ್ರೆ ಉಪಾಧ್ಯಕ್ಷ ಡಾ.ಎನ್‌.ಜಿ. ಭರತೇಶರೆಡ್ಡಿ ತಿಳಿಸಿದ್ದಾರೆ.

‘ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಮೀನಾಕ್ಷಿ, ಮೇ 30ರಂದು ರಕ್ತದೊತ್ತಡದ ಏರುಪೇರಿನಿಂದಾಗಿ ಮನೆಯಲ್ಲಿ ಹಠಾತ್ತನೇ ಪ್ರಜ್ಞಾಶೂನ್ಯರಾದರು. ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ವೈದ್ಯರ ತಂಡ ಇವರ ಮಿದುಳು ವಿಫಲಗೊಂಡಿದ್ದಾಗಿ ಘೋಷಿಸಿತು. ನಂತರ, ಇವರ ಕಾರ್ನಿಯಾ ಹಾಗೂ ಯಕೃತ್ತು (ಲಿವರ್‌)ನ್ನು ಇಬ್ಬರು ರೋಗಿಗಳಿಗೆ ಯಶಸ್ವಿಯಾಗಿ ಜೋಡಿಸಲಾಯಿತು’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT