ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಚುನಾವಣಾಧಿಕಾರಿ ಶಿವೇಗೌಡ, ‘ಇದು ಸತ್ಯಕ್ಕೆ ದೂರವಾದ ಆರೋಪ. ಎಲ್ಲೋ ಒಂದು ಕಡೆ ಮಾತ್ರ ಈ ಸಮಸ್ಯೆ ಕಂಡು ಬಂದಿರಬಹುದು. ಎಣ್ಣೆ ಹಚ್ಚಿಕೊಂಡ ಬೆರಳಿಗೆ ಹಾಕಿದಾಗ, ಹಚ್ಚಿದ ತಕ್ಷಣವೇ ಒರೆಸಿಕೊಂಡಾಗ ಅಳಿಸಿರಬಹುದು. ಉಳಿದಂತೆ, ಎಲ್ಲೆಡೆ ಶಾಂತಿಯುತವಾಗಿ ಯಾವುದೇ ಅಡ್ಡಿ ಇಲ್ಲದೇ ಚುನಾವಣೆ ನಡೆದಿದೆ’ ಎಂದು ತಿಳಿಸಿದ್ದಾರೆ.