ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮಿಂದಲೇ ಅಧಿಕಾರ ಅನುಭವಿಸುತ್ತಿರೋದು: ಎಚ್‌.ವಿಶ್ವನಾಥ್ ತಿರುಗೇಟು

ನಿಗಮ–ಮಂಡಳಿ ಅಧ್ಯಕ್ಷರಿಗೆ
Last Updated 20 ಜೂನ್ 2021, 4:49 IST
ಅಕ್ಷರ ಗಾತ್ರ

ಹುಣಸೂರು (ಮೈಸೂರು): ‘ನಿಗಮ–ಮಂಡಳಿ ಅಧ್ಯಕ್ಷರು ಇದೀಗ ಅಧಿಕಾರ ಅನುಭವಿಸುತ್ತಿರುವುದು ಯಾರಿಂದ ಎಂಬುದನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ
ಎಚ್‌.ವಿಶ್ವನಾಥ್‌, ತಮ್ಮ ವಿರುದ್ಧ ಟೀಕಾ ಪ್ರಹಾರ ನಡೆಸಿದ ನಿಗಮ–ಮಂಡಳಿ ಅಧ್ಯಕ್ಷರಿಗೆ ಶನಿವಾರ ಇಲ್ಲಿ ತಿರುಗೇಟು ನೀಡಿದರು.

‘ನಮ್ಮ ತ್ಯಾಗದಿಂದಲೇ ಇವರಿಗೆ ಅಧಿಕಾರ ಸಿಕ್ಕಿರುವುದು; ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾಗಿರುವುದು. ಬಾಯಿಗೆ ಬಂದಂತೆ ಮಾತನಾಡಬಾರದು. ರಾಜ್ಯ ಉಸ್ತುವಾರಿ ಜೊತೆ ಮಾತನಾಡಿದ್ದನ್ನೇ ನಾನು ಮಾಧ್ಯಮದವರ ಬಳಿ ಹೇಳಿದ್ದೇನಷ್ಟೆ’ ಎಂದು ತಮ್ಮನ್ನು ಭೇಟಿಯಾದಮಾಧ್ಯಮದವರಿಗೆಪ್ರತಿಕ್ರಿಯಿಸಿದರು.

‘ಅಳಿಯನ ವಿಷಯದಲ್ಲಿ ಯಾವುದೇ ಲಾಬಿ ಮಾಡಿಲ್ಲ. ಚೀಫ್ ಎಂಜಿನಿಯರ್ ಆಗಿದ್ದ ಅಳಿಯನನ್ನು ವರ್ಗಾವಣೆ ಮಾಡಿದ ಸರ್ಕಾರ, 10 ತಿಂಗಳಿಂದ ಪರ್ಯಾಯ ಸ್ಥಳ ತೋರಿಸದೆ ಮನೆಯಲ್ಲೇ ಉಳಿಯುವಂತೆ ಮಾಡಿದೆ. ಈ ಬಗ್ಗೆ ಪ್ರಶ್ನಿಸುವುದರಲ್ಲಿ ತಪ್ಪೇನು? ಸರ್ಕಾರಿ ಅಧಿಕಾರಿಯನ್ನು ವರ್ಗ ಮಾಡುವ ಅಧಿಕಾರ ಸರ್ಕಾರಕ್ಕೆ ಇದ್ದ ಮೇಲೆ, ಪರ್ಯಾಯ ಸ್ಥಳ ನೀಡಬೇಕಾದ ಜವಾಬ್ದಾರಿಯೂ ಇದೆಯಲ್ಲವೇ? ಸರ್ಕಾರ ಈ ವಿಷಯದಲ್ಲಿ
ಎಡವಿದೆ’ ಎಂದು ವಿಶ್ವನಾಥ್‌ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT