‘ಅಳಿಯನ ವಿಷಯದಲ್ಲಿ ಯಾವುದೇ ಲಾಬಿ ಮಾಡಿಲ್ಲ. ಚೀಫ್ ಎಂಜಿನಿಯರ್ ಆಗಿದ್ದ ಅಳಿಯನನ್ನು ವರ್ಗಾವಣೆ ಮಾಡಿದ ಸರ್ಕಾರ, 10 ತಿಂಗಳಿಂದ ಪರ್ಯಾಯ ಸ್ಥಳ ತೋರಿಸದೆ ಮನೆಯಲ್ಲೇ ಉಳಿಯುವಂತೆ ಮಾಡಿದೆ. ಈ ಬಗ್ಗೆ ಪ್ರಶ್ನಿಸುವುದರಲ್ಲಿ ತಪ್ಪೇನು? ಸರ್ಕಾರಿ ಅಧಿಕಾರಿಯನ್ನು ವರ್ಗ ಮಾಡುವ ಅಧಿಕಾರ ಸರ್ಕಾರಕ್ಕೆ ಇದ್ದ ಮೇಲೆ, ಪರ್ಯಾಯ ಸ್ಥಳ ನೀಡಬೇಕಾದ ಜವಾಬ್ದಾರಿಯೂ ಇದೆಯಲ್ಲವೇ? ಸರ್ಕಾರ ಈ ವಿಷಯದಲ್ಲಿ
ಎಡವಿದೆ’ ಎಂದು ವಿಶ್ವನಾಥ್ ಕಿಡಿಕಾರಿದರು.