ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಂಘದ ಸದಸ್ಯರಾದ ಮಂಜುಳಾ ಮಾನಸ, ‘ಇದೊಂದು ತಪ್ಪು ನಿರ್ಧಾರ. ಸಭೆಯಲ್ಲಿ ನಮಗೆ ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕೊಡಲಿಲ್ಲ. ಆರಂಭದಲ್ಲೇ ಗಲಾಟೆ ಆರಂಭವಾಯಿತು. ಹೀಗಾಗಿ, ನಾವು ಒಟ್ಟು 150 ಮಂದಿ ವಕೀಲರು ಆರೋಪಿಗಳ ಪರವಾಗಿ ವಕಾಲತು ವಹಿಸಲು ಅರ್ಜಿ ಸಲ್ಲಿಸಿದ್ದೇವೆ’ ಎಂದು ತಿಳಿಸಿದ್ದಾರೆ.