ಮೈಸೂರು: ‘ಟಿಪ್ಪು ಪಥದಲ್ಲಿರುವವರು ಖಡ್ಗಗಳನ್ನು ಕೆಳಗಿಳಿಸಿ ಕುರಾನಿನ ಜತೆ ಹಾಗೂ ಗೋಡ್ಸೆ ಪಥದವರು ಪಿಸ್ತೂಲ್ ಕೆಳಗಿಟ್ಟು ಭಗವದ್ಗೀತೆ ಜತೆ ಗಾಂಧಿ ಪಥದತ್ತ ಬರಲಿ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಹೇಳಿದರು.
ಬಹುರೂಪಿ ನಾಟಕೋತ್ಸವ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ಗಾಂಧಿ ಪಥ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಎಡ –ಬಲ ಪಂಥಗಳ ನಡುವಿನ ಚರ್ಚೆಯ ಬದಲು ಸುಳ್ಳು– ಸತ್ಯದ ನಡುವೆ, ಒಟ್ಟುಗೂಡಿಸುವ ಪಥ ಮತ್ತು ಒಡಕು ಉಂಟುಮಾಡುವ ಪಥಗಳ ನಡುವೆ ಚರ್ಚೆ ನಡೆಯಬೇಕಿದೆ ಎಂದು ವಸಂತಕುಮಾರ್ ಅವರು ಪ್ರತಿಪಾದಿಸಿದರು.