ಸ್ನೇಹದ ಹೆಸರಲ್ಲಿ ವಂಚನೆ
‘ದಟ್ಟಗಳ್ಳಿಯ ವಿಷ್ಣು ಎಂಬಾತ ನನ್ನ ಮಗಳನ್ನು ಪರಿಚಯ ಮಾಡಿಕೊಂಡು, ಸ್ನೇಹದ ಹೆಸರಿನಲ್ಲಿ ನಂಬಿಸಿ, ಈಕೆಯಿಂದ 140 ಗ್ರಾಂ ಚಿನ್ನದ ಒಡವೆಗಳನ್ನು ಪಡೆದುಕೊಂಡಿದ್ದಾನೆ. ಸಕಾಲಕ್ಕೆ ವಾಪಸ್ ಕೊಡದಿದ್ದಾಗ, ಕೇಳಿದ್ದಕ್ಕೆ ನಿಂದಿಸಿ ಧಮ್ಕಿ ಹಾಕಿದ್ದಾನೆ’ ಎಂದು ನಂದಪ್ರಕಾಶ್ ಎಂಬುವವರು ದೂರು ನೀಡಿದ್ದಾರೆ ಎಂದು ಕುವೆಂಪು ನಗರ ಪೊಲೀಸರು ತಿಳಿಸಿದ್ದಾರೆ.