<p><strong>ಮೈಸೂರು: </strong>ಈ ಬಾರಿ ಪೂರ್ವ ಮುಂಗಾರು ಮಳೆಯು ವಾಡಿಕೆಯಷ್ಟು ಬಿದ್ದಿದ್ದು, ಕೇವಲ 1 ಮಿ.ಮೀನಷ್ಟು ಮಳೆಯ ಕೊರತೆ ಮಾತ್ರ ಉಂಟಾಗಿದೆ. ಶೇ 99ರಷ್ಟು ಮಳೆ ಬಿದ್ದಿರುವುದರಿಂದ ಎಲ್ಲೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ 44,511 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಿತ್ತನೆಯನ್ನು ಪೂರ್ಣಗೊಳಿಸಿದ್ದಾರೆ.</p>.<p>ಕಳೆದ ವರ್ಷ ಪೂರ್ವಮುಂಗಾರು ಮಳೆಯು ಈ ಬಾರಿಗಿಂತಲೂ ಹೆಚ್ಚು ಅಬ್ಬರಿಸಿತ್ತು. 89 ಮಿ.ಮೀನಷ್ಟು ಬೀಳಬೇಕಾದ ಮಳೆ ಬರೋಬರಿ 133 ಮಿ.ಮೀನಷ್ಟು ಸುರಿದಿತ್ತು. ನಿರೀಕ್ಷೆಗಿಂತಲೂ ಹೆಚ್ಚಿನ ಮಳೆಯಾಗಿತ್ತು. ಆದರೆ, ಈ ಬಾರಿ ಅಷ್ಟು ಪ್ರಮಾಣದಲ್ಲಿ ಮಳೆಯಾಗದಿದ್ದರೂ, ತೀರಾ ನಿರಾಸೆಯಾಗುವ ಹಂತದಲ್ಲೇನೂ ಪರಿಸ್ಥಿತಿ ಇಲ್ಲ. 88 ಮಿ.ಮೀನಷ್ಟು ಮಳೆಯಾಗಿರುವುದರಿಂದ ಬಿತ್ತನೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಹಾಂತಪ್ಪ ಹೇಳುತ್ತಾರೆ.</p>.<p>ಈ ಬಾರಿ ಎಲ್ಲೆಡೆ ಒಂದೇ ಪ್ರಮಾಣದಲ್ಲಿ ಮಳೆಯಾಗದೇ ಇರುವುದು ಕೊಂಚ ಸಮಸ್ಯೆ ಎನಿಸಿದೆ. ತಿ.ನರಸೀಪುರ, ನಂಜನಗೂಡು, ಎಚ್.ಡಿ.ಕೋಟೆ ಭಾಗಗಳಲ್ಲಿ ಅಧಿಕ ಮಳೆಯಾಗಿದೆ. ಕೆಲವೆಡೆ ಹೆಚ್ಚಿನ ಮಳೆಯಾಗಿಲ್ಲ. ಈ ವಾರವೂ ಅಲ್ಲೆಲ್ಲ ಮಳೆಯಾದರೆ ಬಿತ್ತನೆಕಾರ್ಯ ಇನ್ನಷ್ಟು ಚುರುಕುಗೊಳ್ಳಬಹುದು ಎಂಬುದು ಕೃಷಿ ಇಲಾಖೆಯ ನಿರೀಕ್ಷೆಯಾಗಿದೆ.</p>.<p>ಬಿತ್ತನೆಯಲ್ಲಿ ಹೆಸರುಕಾಳನ್ನೇ ಬಹುತೇಕ ರೈತರು ಈ ಬಾರಿ ಆರಿಸಿಕೊಂಡಿದ್ದಾರೆ. ನಿರೀಕ್ಷೆಯಲ್ಲಿ ಶೇ 51ರಷ್ಟು ಇದು ಪೂರ್ಣಗೊಂಡಿದೆ. ಇದನ್ನು ಬಿಟ್ಟರೆ ಹತ್ತಿ ಬೆಳೆಯ ಕಡೆಗೂ ರೈತರು ಹೆಚ್ಚಿನ ಆಸಕ್ತಿ ತಳೆದಿದ್ದಾರೆ. ಒಟ್ಟು ನಿರೀಕ್ಷೆಯಲ್ಲಿ ಶೇ 42ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆಯ ಅಂಕಿಅಂಶಗಳು ಹೇಳುತ್ತವೆ.</p>.<p><strong>ಮಳೆ ಮತ್ತು ಬಿತ್ತನೆಯ ಪ್ರಮಾಣ</strong></p>.<p>ಪೂರ್ವಮುಂಗಾರು ಮಳೆಯು ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ವಾಡಿಕೆಯಷ್ಟು ಬಿದ್ದಿದ್ದು, ಎಲ್ಲೆಡೆ ಬಿತ್ತನೆ ಕಾರ್ಯ ಚುರುಕುಗೊಂಡಿದೆ. 44,511 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಈಗಾಗಲೇ ನಡೆದಿದೆ. ಉಳಿದ ಕಡೆ ಬಿತ್ತನೆಗೆ ಭೂಮಿಯನ್ನು ಹಸನು ಮಾಡುವ ಕಾರ್ಯದಲ್ಲಿ ರೈತರು ನಿರತರಾಗಿದ್ದಾರೆ.</p>.<p>89 ಮಿ.ಮೀ– ಮಳೆಯ ನಿರೀಕ್ಷೆ,88 ಮಿ.ಮೀ– ಬಿದ್ದಿರುವ ಮಳೆಯ ಪ್ರಮಾಣ,133 ಮಿ.ಮೀ– ಕಳೆದ ವರ್ಷ ಬಿದ್ದ ಮಳೆಯ ಪ್ರಮಾಣ,3.95 ಲಕ್ಷ ಹೆಕ್ಟೇರ್– ಬಿತ್ತನೆ ಗುರಿ,44,511 ಹೆಕ್ಟೇರ್– ಬಿತ್ತನೆಯಾದ ಪ್ರದೇಶ,1,610 ಕ್ವಿಂಟಲ್ – ರೈತ ಸಂಪರ್ಕ ಕೇಂದ್ರಗಳಿಂದ ಬಿತ್ತನೆ ಬೀಜ ಮಾರಾಟ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಈ ಬಾರಿ ಪೂರ್ವ ಮುಂಗಾರು ಮಳೆಯು ವಾಡಿಕೆಯಷ್ಟು ಬಿದ್ದಿದ್ದು, ಕೇವಲ 1 ಮಿ.ಮೀನಷ್ಟು ಮಳೆಯ ಕೊರತೆ ಮಾತ್ರ ಉಂಟಾಗಿದೆ. ಶೇ 99ರಷ್ಟು ಮಳೆ ಬಿದ್ದಿರುವುದರಿಂದ ಎಲ್ಲೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ 44,511 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಿತ್ತನೆಯನ್ನು ಪೂರ್ಣಗೊಳಿಸಿದ್ದಾರೆ.</p>.<p>ಕಳೆದ ವರ್ಷ ಪೂರ್ವಮುಂಗಾರು ಮಳೆಯು ಈ ಬಾರಿಗಿಂತಲೂ ಹೆಚ್ಚು ಅಬ್ಬರಿಸಿತ್ತು. 89 ಮಿ.ಮೀನಷ್ಟು ಬೀಳಬೇಕಾದ ಮಳೆ ಬರೋಬರಿ 133 ಮಿ.ಮೀನಷ್ಟು ಸುರಿದಿತ್ತು. ನಿರೀಕ್ಷೆಗಿಂತಲೂ ಹೆಚ್ಚಿನ ಮಳೆಯಾಗಿತ್ತು. ಆದರೆ, ಈ ಬಾರಿ ಅಷ್ಟು ಪ್ರಮಾಣದಲ್ಲಿ ಮಳೆಯಾಗದಿದ್ದರೂ, ತೀರಾ ನಿರಾಸೆಯಾಗುವ ಹಂತದಲ್ಲೇನೂ ಪರಿಸ್ಥಿತಿ ಇಲ್ಲ. 88 ಮಿ.ಮೀನಷ್ಟು ಮಳೆಯಾಗಿರುವುದರಿಂದ ಬಿತ್ತನೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಹಾಂತಪ್ಪ ಹೇಳುತ್ತಾರೆ.</p>.<p>ಈ ಬಾರಿ ಎಲ್ಲೆಡೆ ಒಂದೇ ಪ್ರಮಾಣದಲ್ಲಿ ಮಳೆಯಾಗದೇ ಇರುವುದು ಕೊಂಚ ಸಮಸ್ಯೆ ಎನಿಸಿದೆ. ತಿ.ನರಸೀಪುರ, ನಂಜನಗೂಡು, ಎಚ್.ಡಿ.ಕೋಟೆ ಭಾಗಗಳಲ್ಲಿ ಅಧಿಕ ಮಳೆಯಾಗಿದೆ. ಕೆಲವೆಡೆ ಹೆಚ್ಚಿನ ಮಳೆಯಾಗಿಲ್ಲ. ಈ ವಾರವೂ ಅಲ್ಲೆಲ್ಲ ಮಳೆಯಾದರೆ ಬಿತ್ತನೆಕಾರ್ಯ ಇನ್ನಷ್ಟು ಚುರುಕುಗೊಳ್ಳಬಹುದು ಎಂಬುದು ಕೃಷಿ ಇಲಾಖೆಯ ನಿರೀಕ್ಷೆಯಾಗಿದೆ.</p>.<p>ಬಿತ್ತನೆಯಲ್ಲಿ ಹೆಸರುಕಾಳನ್ನೇ ಬಹುತೇಕ ರೈತರು ಈ ಬಾರಿ ಆರಿಸಿಕೊಂಡಿದ್ದಾರೆ. ನಿರೀಕ್ಷೆಯಲ್ಲಿ ಶೇ 51ರಷ್ಟು ಇದು ಪೂರ್ಣಗೊಂಡಿದೆ. ಇದನ್ನು ಬಿಟ್ಟರೆ ಹತ್ತಿ ಬೆಳೆಯ ಕಡೆಗೂ ರೈತರು ಹೆಚ್ಚಿನ ಆಸಕ್ತಿ ತಳೆದಿದ್ದಾರೆ. ಒಟ್ಟು ನಿರೀಕ್ಷೆಯಲ್ಲಿ ಶೇ 42ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆಯ ಅಂಕಿಅಂಶಗಳು ಹೇಳುತ್ತವೆ.</p>.<p><strong>ಮಳೆ ಮತ್ತು ಬಿತ್ತನೆಯ ಪ್ರಮಾಣ</strong></p>.<p>ಪೂರ್ವಮುಂಗಾರು ಮಳೆಯು ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ವಾಡಿಕೆಯಷ್ಟು ಬಿದ್ದಿದ್ದು, ಎಲ್ಲೆಡೆ ಬಿತ್ತನೆ ಕಾರ್ಯ ಚುರುಕುಗೊಂಡಿದೆ. 44,511 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಈಗಾಗಲೇ ನಡೆದಿದೆ. ಉಳಿದ ಕಡೆ ಬಿತ್ತನೆಗೆ ಭೂಮಿಯನ್ನು ಹಸನು ಮಾಡುವ ಕಾರ್ಯದಲ್ಲಿ ರೈತರು ನಿರತರಾಗಿದ್ದಾರೆ.</p>.<p>89 ಮಿ.ಮೀ– ಮಳೆಯ ನಿರೀಕ್ಷೆ,88 ಮಿ.ಮೀ– ಬಿದ್ದಿರುವ ಮಳೆಯ ಪ್ರಮಾಣ,133 ಮಿ.ಮೀ– ಕಳೆದ ವರ್ಷ ಬಿದ್ದ ಮಳೆಯ ಪ್ರಮಾಣ,3.95 ಲಕ್ಷ ಹೆಕ್ಟೇರ್– ಬಿತ್ತನೆ ಗುರಿ,44,511 ಹೆಕ್ಟೇರ್– ಬಿತ್ತನೆಯಾದ ಪ್ರದೇಶ,1,610 ಕ್ವಿಂಟಲ್ – ರೈತ ಸಂಪರ್ಕ ಕೇಂದ್ರಗಳಿಂದ ಬಿತ್ತನೆ ಬೀಜ ಮಾರಾಟ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>