ಮೈಸೂರು: ‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವುದೇ ಉತ್ತಮ. ಮಧ್ಯಂತರ ಚುನಾವಣೆಯೊಂದೇ ಈ ಬಿಕ್ಕಟ್ಟಿಗೆ ಪರಿಹಾರ’ ಎಂದು ಮಾಜಿ ಸ್ಪೀಕರ್ ಕೃಷ್ಣ ಮಂಗಳವಾರ ಇಲ್ಲಿ ಅಭಿಪ್ರಾಯಪಟ್ಟರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ಹೊಸದಾಗಿ ಚುನಾವಣೆಗೆ ಮುಂದಾದರೆ ಜನ ತಮಗೆ ಬೇಕಾದ ಸರ್ಕಾರವನ್ನು ಆಯ್ಕೆ ಮಾಡಬಹುದು. ಇದು ಬಹಳ ಯೋಗ್ಯ ನಿರ್ಧಾರವಾಗಲಿದೆ’ ಎಂದರು.