‘ಆಳುವ ವರ್ಗವು ಸೊಕ್ಕು, ಕ್ರೌರ್ಯವನ್ನು ಜನರ ವಿರುದ್ಧ ತೋರಿಸಲು ಮೇಲ್ವರ್ಗದ ಬೆಂಬಲವೇ ಕಾರಣ. ಎಲ್ಲರ ಆತ್ಮಸಾಕ್ಷಿಯ ನಾಶಗೊಂಡಿರುವುದರಿಂದಲೇ ಬಹುತ್ವ ಭಾರತದ ಅಡಿಪಾಯ ಅಲುಗಾಡುತ್ತಿದೆ. ಮತೀಯವಾದ ಮಕ್ಕಳು, ಯುವ ಸಮುದಾಯಕ್ಕೆ ದೇಶದ ಬಹುತ್ವದ ಸುಂದರ ಲೋಕ ಕಾಣದಂತೆ ಮಾಡಿದೆ. ಸಂಗೀತ, ಸಾಹಿತ್ಯ ಆಸ್ವಾದಿಸುವ ಸಂವೇದನಾಶೀಲ ಶಕ್ತಿಯನ್ನೇ ಯುವಜನರು ಕಳೆದುಕೊಳ್ಳುವಂತೆ ಮಾಡಲಾಗಿದೆ’ ಎಂದರು.