‘ಅಶೋಕ್ ಬಂದ ಮೇಲೆ ನಮ್ಮದೇನಿದೆ?’
ಮೈಸೂರು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಗೆ ಮೊದಲೇ ಸುದ್ದಿಗಾರರೊಂದಿಗೆ ಮಳೆ, ರಸ್ತೆ ಗುಂಡಿ ವಿಚಾರವಾಗಿ ಮಾತನಾಡಲು ಕಂದಾಯ ಸಚಿವ ಆರ್.ಅಶೋಕ್ ಮುಂದಾದರು. ಆಗ ಅಲ್ಲಿಗೆ ಬಂದ ಬಸವರಾಜ ಬೊಮ್ಮಾಯಿ, ‘ಅಶೋಕ್ ಬಂದಮೇಲೆ ನಮ್ಮದೇನಿದೆ?’ ಎಂದು ಕಾಲೆಳೆದರು. ತಕ್ಷಣವೇ ಕಂದಾಯ ಸಚಿವರು ಹೊರಡಲು ಅನುವಾದರು. ಆಗ, ಮುಖ್ಯಮಂತ್ರಿ, ‘ಅಶೋಕ್ ಬನ್ನಿ ಬನ್ನಿ’ ಎಂದು ಕರೆದರು.