ನಗರದ ಒಕ್ಕಲಗೇರಿ ನಿವಾಸಿ ಸನತ್ ಕುಮಾರ್ ಕಾಯಂಗಡಿ ಬೀದಿಯಲ್ಲಿ ಪಿತ್ರಾರ್ಜಿತ ನಿವೇಶನ ಹೊಂದಿದ್ದು, 2017ರಲ್ಲಿ ನಗರಸಭೆಗೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿ, ಸ್ವೀಕೃತಿ ಪತ್ರ ಪಡೆದಿದ್ದರು. ದಾಖಲೆ ಪರಿಶೀಲನೆ ಹಂತದಲ್ಲಿ ಹೊಸ ನಿಯಮದಿಂದ ತಡೆ ಉಂಟಾಗಿತ್ತು. ಇದರಿಂದಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಸೌಲಭ್ಯ ಹಾಗೂ ಬ್ಯಾಂಕ್ನಲ್ಲಿ ಗೃಹ ನಿರ್ಮಾಣ ಸಾಲ ಪಡೆಯಲು ಸಾಧ್ಯವಾಗಿರಲಿಲ್ಲ. ಮುಡಾ ಹಾಗೂ ನಗರಸಭೆ ಅಧಿಕಾರಿಗಳ ನಡುವಿನ ಸಮನ್ವಯತೆ ಕೊರತೆಯಿಂದಾಗಿ ನೂರಾರು ಮಂದಿ ಮನೆ ಕಟ್ಟಲು ಪ್ರಮಾಣ ಪತ್ರ ಪಡೆಯಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಹೊಸ ಮನೆ ಕಟ್ಟಲು ಪರವಾನಗಿ ಪಡೆಯಲು ಸಾಧ್ಯವಾಗದೆ, ನಗರಸಭೆಯವಿರುದ್ಧ ಹೈಕೋರ್ಟ್ನಲ್ಲಿ ಮೊಕದ್ದಮೆ ಹೂಡಲು ಕೆಲವರುಸಿದ್ಧತೆ ನಡೆಸಿದ್ದಾರೆ.