‘ಕುರುಬರಿಗೆ ಸಿದ್ದರಾಮಯ್ಯನ್ನ ನೋಡಿದ್ರೆ ಇಂಗ್ಲಿಷ್ ಫಿಲಂ ನೋಡಿದಂಗಾಗುತ್ತೆ. ಅದಕ್ಕೆ ಅವ ವೇದಿಕೆಗೆ ಬಂದಾಗಲೆಲ್ಲಾ ಶಿಳ್ಳೆ, ಚಪ್ಪಾಳೆ ಹೊಡಿತಾರೆ. ಸಮುದಾಯವನ್ನು ಹೈಜಾಕ್ ಮಾಡಿಕೊಂಡಿರುವ ಆತ, ಸಮಾಜಕ್ಕಾಗಿ ಏನನ್ನೂ ಮಾಡಿಲ್ಲ. ಕನಕ ಗುರುಪೀಠ ಸ್ಥಾಪಿಸುವುದರಿಂದ ಹಿಡಿದು, ಈಚೆಗಷ್ಟೇ ನಡೆದ ಎಸ್ಟಿ ಸ್ಥಾನಮಾನದ ಹೋರಾಟದಲ್ಲೂ ಭಾಗಿಯಾಗಲಿಲ್ಲ’ ಎಂದು ಅವರು ವಾಗ್ದಾಳಿ ನಡೆಸಿದರು.