<p><strong>ಮೈಸೂರು: </strong>ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಮಂಗಳವಾರ ನಡೆದ ಮಾಸಿಕ ಸಾಮೂಹಿಕ ವಿವಾಹ ಮಹೋತ್ಸವವು ಐಷಾರಾಮಿ ವಿವಾಹದ ಬದಲಿಗೆ ಸರಳ ವಿವಾಹ ಆಚರಣೆಯ ಸಂದೇಶವನ್ನು ರವಾನಿಸಿತು. ಇದರಲ್ಲಿ ಭಾಗಿಯಾದ ಎಲ್ಲ ಸ್ವಾಮೀಜಿಗಳು, ಗಣ್ಯರು ಸರಳ ವಿವಾಹದ ಮಹತ್ವ ಕುರಿತು ಮಾತನಾಡಿದರು.</p>.<p>ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಐಷಾರಾಮಿ ವಿವಾಹದಲ್ಲಿ ಉಣಬಡಿಸುವ ಊಟದಲ್ಲಿ ಶೇ 25ರಷ್ಟನ್ನೂ ಜನರು ತಿನ್ನುವುದಿಲ್ಲ. ಇದೆಲ್ಲವೂ ‘ನ್ಯಾಷನಲ್ ವೇಸ್ಟ್’ ಎಂದು ಕಿಡಿಕಾರಿದರು.</p>.<p>ವೈಭವೋಪೇತ ಮದುವೆಗಳಿಗೆ ಮಾಡುವ ಖರ್ಚುಗಳು ಕುಟುಂಬಕ್ಕೆ ಹೊರೆಯಾಗುತ್ತದೆ. ಯಾರೋ ಸಿರಿವಂತರು ಅಂತಹ ಮದುವೆ ಮಾಡಿದರು ಎಂಬ ಕಾರಣಕ್ಕೆ ಮಧ್ಯಮವರ್ಗದವರು, ಬಡವರು ಸಾಲ ಮಾಡಿ, ಆಸ್ತಿ ಮಾರಾಟ ಮಾಡಿ ವಿವಾಹ ಮಾಡುವುದು ಸರಿಯಲ್ಲ ಎಂದರು.</p>.<p>ಕೇವಲ ಸರಳ ವಿವಾಹವಾಗುವುದು ಮಾತ್ರವಲ್ಲ ಅಂತರ್ಜಾತಿ ವಿವಾಹವಾಗುವುದೂ ಇಂದಿನ ಪರಿಸ್ಥಿತಿಗೆ ಅತಿ ಮುಖ್ಯ. ಬಸವಣ್ಣನವರು ಅಂದೇ ಇಂತಹದ್ದೊಂದು ವಿವಾಹ ನೆರವೇರಿಸುವ ಮೂಲಕ ಕ್ರಾಂತಿಕಾರಕ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ. ಅದರಂತೆ ಅಂತರ್ಜಾತಿ ವಿವಾಹಗಳಾದರೆ ಸಮಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.</p>.<p>ಸುತ್ತೂರಿನ ಈ ವೇದಿಕೆಯಲ್ಲಿ ಸಮಾನತೆಯನ್ನು ಸಾಧಿಸಲಾಗಿದೆ. ದಲಿತರು, ಕುರುಬರು, ಲಿಂಗಾಯತರು, ನಾಯಕರು ಎಲ್ಲರೂ ಒಟ್ಟಿಗೆ ಒಂದೇ ಸಮನಾಗಿ ಕುಳಿತಿದ್ದಾರೆ. ಇಂತಹ ಸಮಾನತೆ ಇರಬೇಕು ಎಂದರು.</p>.<p><strong>ದಾಂಪತ್ಯ ಶಿಥಿಲವಾಗಬಾರದು– ಸಿದ್ಧಲಿಂಗ ಸ್ವಾಮೀಜಿ</strong></p>.<p>ಇತ್ತೀಚಿನ ದಿನಗಳಲ್ಲಿ ಬಹುತೇಕರ ದಾಂಪತ್ಯ ಜೀವನ ಶಿಥಿಲವಾಗುತ್ತಿದೆ. ಇದನ್ನು ತಡೆಗಟ್ಟಲು ಸತಿ, ಪತಿ ಇಬ್ಬರೂ ಸಮಾನರು ಎಂಬ ತತ್ವದಡಿ ಜೀವನ ಸಾಗಿಸಬೇಕು ಎಂದು ತುಮಕೂರಿನ ಸಿದ್ಧಗಂಗಾಮಠದ ಸಿದ್ಧಲಿಂಗ ಸ್ವಾಮೀಜಿ ಕಿವಿಮಾತು ಹೇಳಿದರು.</p>.<p>ಸತಿ ಮತ್ತು ಪತಿ ಇಬ್ಬರಲ್ಲೂ ನಾನು ಹೆಚ್ಚು ಎಂಬ ಅಹಮ್ಮಿಕೆ ಬರಬಾರದು. ನನ್ನಂತೆ ಅವರು ಎಂದು ತಿಳಿಯಬೇಕು. ಪ್ರೀತಿ, ವಿಶ್ವಾಸಗಳಿರಬೇಕು. ಆಗ ದಾಂಪತ್ಯ ಗಟ್ಟಿಯಾಗುತ್ತದೆ ಎಂದರು. ಇದಕ್ಕೆ ಪೂರಕವಾಗಿ ಅವರು ಜೇಡರ ದಾಸಿಮಯ್ಯ ಹಾಗೂ ಅಲ್ಲಮಪ್ರಭು ಅವರ ವಚನಗಳನ್ನು ಉಲ್ಲೇಖಿಸಿದರು.</p>.<p>ಎಂ.ಎ.ನೀಲಾಂಬಿಕಾ ಅವರ ‘ವಚನಕ್ಕೊಂದು ಕಥೆ’ ಕೃತಿಯನ್ನು ಸಚಿವ ಎಸ್.ಟಿ.ಸೋಮಶೇಖರ್ ಬಿಡುಗಡೆ ಮಾಡಿದರು. ಜೆಎಸ್ಎಸ್ ವಸತಿ ಶಾಲಾ ವಿದ್ಯಾರ್ಥಿಗಳು ವಚನಗಾಯನವನ್ನು ಪ್ರಸ್ತುತಪಡಿಸಿದರು.</p>.<p>ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ವಾಟಾಳು ಮಠದ ಸಿದ್ಧಲಿಂಗಸ್ವಾಮೀಜಿ, ಸಮಾಜ ಸೇವಕಿ ಎಸ್.ಆರ್.ಗಾಯತ್ರಿ, ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಮಂಗಳವಾರ ನಡೆದ ಮಾಸಿಕ ಸಾಮೂಹಿಕ ವಿವಾಹ ಮಹೋತ್ಸವವು ಐಷಾರಾಮಿ ವಿವಾಹದ ಬದಲಿಗೆ ಸರಳ ವಿವಾಹ ಆಚರಣೆಯ ಸಂದೇಶವನ್ನು ರವಾನಿಸಿತು. ಇದರಲ್ಲಿ ಭಾಗಿಯಾದ ಎಲ್ಲ ಸ್ವಾಮೀಜಿಗಳು, ಗಣ್ಯರು ಸರಳ ವಿವಾಹದ ಮಹತ್ವ ಕುರಿತು ಮಾತನಾಡಿದರು.</p>.<p>ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಐಷಾರಾಮಿ ವಿವಾಹದಲ್ಲಿ ಉಣಬಡಿಸುವ ಊಟದಲ್ಲಿ ಶೇ 25ರಷ್ಟನ್ನೂ ಜನರು ತಿನ್ನುವುದಿಲ್ಲ. ಇದೆಲ್ಲವೂ ‘ನ್ಯಾಷನಲ್ ವೇಸ್ಟ್’ ಎಂದು ಕಿಡಿಕಾರಿದರು.</p>.<p>ವೈಭವೋಪೇತ ಮದುವೆಗಳಿಗೆ ಮಾಡುವ ಖರ್ಚುಗಳು ಕುಟುಂಬಕ್ಕೆ ಹೊರೆಯಾಗುತ್ತದೆ. ಯಾರೋ ಸಿರಿವಂತರು ಅಂತಹ ಮದುವೆ ಮಾಡಿದರು ಎಂಬ ಕಾರಣಕ್ಕೆ ಮಧ್ಯಮವರ್ಗದವರು, ಬಡವರು ಸಾಲ ಮಾಡಿ, ಆಸ್ತಿ ಮಾರಾಟ ಮಾಡಿ ವಿವಾಹ ಮಾಡುವುದು ಸರಿಯಲ್ಲ ಎಂದರು.</p>.<p>ಕೇವಲ ಸರಳ ವಿವಾಹವಾಗುವುದು ಮಾತ್ರವಲ್ಲ ಅಂತರ್ಜಾತಿ ವಿವಾಹವಾಗುವುದೂ ಇಂದಿನ ಪರಿಸ್ಥಿತಿಗೆ ಅತಿ ಮುಖ್ಯ. ಬಸವಣ್ಣನವರು ಅಂದೇ ಇಂತಹದ್ದೊಂದು ವಿವಾಹ ನೆರವೇರಿಸುವ ಮೂಲಕ ಕ್ರಾಂತಿಕಾರಕ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ. ಅದರಂತೆ ಅಂತರ್ಜಾತಿ ವಿವಾಹಗಳಾದರೆ ಸಮಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.</p>.<p>ಸುತ್ತೂರಿನ ಈ ವೇದಿಕೆಯಲ್ಲಿ ಸಮಾನತೆಯನ್ನು ಸಾಧಿಸಲಾಗಿದೆ. ದಲಿತರು, ಕುರುಬರು, ಲಿಂಗಾಯತರು, ನಾಯಕರು ಎಲ್ಲರೂ ಒಟ್ಟಿಗೆ ಒಂದೇ ಸಮನಾಗಿ ಕುಳಿತಿದ್ದಾರೆ. ಇಂತಹ ಸಮಾನತೆ ಇರಬೇಕು ಎಂದರು.</p>.<p><strong>ದಾಂಪತ್ಯ ಶಿಥಿಲವಾಗಬಾರದು– ಸಿದ್ಧಲಿಂಗ ಸ್ವಾಮೀಜಿ</strong></p>.<p>ಇತ್ತೀಚಿನ ದಿನಗಳಲ್ಲಿ ಬಹುತೇಕರ ದಾಂಪತ್ಯ ಜೀವನ ಶಿಥಿಲವಾಗುತ್ತಿದೆ. ಇದನ್ನು ತಡೆಗಟ್ಟಲು ಸತಿ, ಪತಿ ಇಬ್ಬರೂ ಸಮಾನರು ಎಂಬ ತತ್ವದಡಿ ಜೀವನ ಸಾಗಿಸಬೇಕು ಎಂದು ತುಮಕೂರಿನ ಸಿದ್ಧಗಂಗಾಮಠದ ಸಿದ್ಧಲಿಂಗ ಸ್ವಾಮೀಜಿ ಕಿವಿಮಾತು ಹೇಳಿದರು.</p>.<p>ಸತಿ ಮತ್ತು ಪತಿ ಇಬ್ಬರಲ್ಲೂ ನಾನು ಹೆಚ್ಚು ಎಂಬ ಅಹಮ್ಮಿಕೆ ಬರಬಾರದು. ನನ್ನಂತೆ ಅವರು ಎಂದು ತಿಳಿಯಬೇಕು. ಪ್ರೀತಿ, ವಿಶ್ವಾಸಗಳಿರಬೇಕು. ಆಗ ದಾಂಪತ್ಯ ಗಟ್ಟಿಯಾಗುತ್ತದೆ ಎಂದರು. ಇದಕ್ಕೆ ಪೂರಕವಾಗಿ ಅವರು ಜೇಡರ ದಾಸಿಮಯ್ಯ ಹಾಗೂ ಅಲ್ಲಮಪ್ರಭು ಅವರ ವಚನಗಳನ್ನು ಉಲ್ಲೇಖಿಸಿದರು.</p>.<p>ಎಂ.ಎ.ನೀಲಾಂಬಿಕಾ ಅವರ ‘ವಚನಕ್ಕೊಂದು ಕಥೆ’ ಕೃತಿಯನ್ನು ಸಚಿವ ಎಸ್.ಟಿ.ಸೋಮಶೇಖರ್ ಬಿಡುಗಡೆ ಮಾಡಿದರು. ಜೆಎಸ್ಎಸ್ ವಸತಿ ಶಾಲಾ ವಿದ್ಯಾರ್ಥಿಗಳು ವಚನಗಾಯನವನ್ನು ಪ್ರಸ್ತುತಪಡಿಸಿದರು.</p>.<p>ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ವಾಟಾಳು ಮಠದ ಸಿದ್ಧಲಿಂಗಸ್ವಾಮೀಜಿ, ಸಮಾಜ ಸೇವಕಿ ಎಸ್.ಆರ್.ಗಾಯತ್ರಿ, ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>