<p>2 ಕೋಟ್ಗಳಿವೆ...</p>.<p>ಮೈಸೂರು: ಮೇ ದಿನಾಚರಣೆ ಪ್ರಯುಕ್ತ ವಿವಿಧ ಎಡಪಕ್ಷಗಳ ನೇತೃತ್ವದಲ್ಲಿ ಕಾರ್ಮಿಕರು ನಗರದಲ್ಲಿ ಬುಧವಾರ ಬೃಹತ್ ಜಾಥಾ ನಡೆಸಿದರು.</p>.<p>ಪುರಭವನದಿಂದ ಹೊರಟ ನೂರಾರು ಕಾರ್ಮಿಕರು ಕೆಂಬಾವುಟಗಳನ್ನು ಹಿಡಿದು, ಕೆಂಪು ಟೋಪಿ ಧರಿಸಿ, ಬಂಡವಾಳಷಾಹಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.</p>.<p>ವಿವಿಧ ಸಂಘಟನೆಗಳ ಬ್ಯಾನರ್ಗಳನ್ನು ಹಿಡಿದ ಕಾರ್ಮಿಕರು ಸುಬ್ಬರಾಯರಕೆರೆಯ ಸ್ವಾತಂತ್ರ್ಯ ಉದ್ಯಾನಕ್ಕೆ ಬಂದು ಸಮಾವೇಶ ನಡೆಸಿದರು.</p>.<p>ಸಮಾವೇಶದಲ್ಲಿ ಮಾತನಾಡಿದ ಎಐಟಿಯುಸಿ ಮುಖಂಡ ಶೇಷಾದ್ರಿ, ‘ಪ್ರಭುತ್ವದ ವಿರುದ್ದ ಮತ್ತು ಬಂಡವಾಳಷಾಹಿ ವಿರುದ್ಧ ಮುಂಬರುವ ದಿನಗಳಲ್ಲಿ ಬೃಹತ್ ಹೋರಾಟ ನಡೆಸಬೇಕಿದೆ. ಹಾಗಾಗಿ, ಕಾರ್ಮಿಕರು ಈಗಿನಿಂದಲೇ ಮಾನಸಿಕವಾಗಿ ಹೋರಾಟಕ್ಕೆ ಅಣಿಯಾಗಿರಬೇಕು’ ಎಂದು ಕರೆ ನೀಡಿದರು.</p>.<p>‘ವಿವಿಧ ಕಾರ್ಮಿಕ ಸಂಘಟನೆಗಳು ಈಗಾಗಲೇ 44 ಪ್ರಮುಖ ಬೇಡಿಕೆಗಳನ್ನು ಸಿದ್ಧಪಡಿಸಿಕೊಂಡಿವೆ. ಚುನಾವಣೆಯಲ್ಲಿ ಯಾರು ಜಯಶಾಲಿಯಾಗುತ್ತಾರೆ ಎಂಬುದು ನಮಗೆ ಮುಖ್ಯ ಅಲ್ಲ. ಯಾರೇ ಅಧಿಕಾರಕ್ಕೆ ಬಂದರೂ ಅವರ ಮುಂದೆ ಈ ಬೇಡಿಕೆಗಳನ್ನು ಮಂಡಿಸಲಾಗುವುದು’ ಎಂದು ಹೇಳಿದರು.</p>.<p>ಕಾರ್ಮಿಕ ವರ್ಗದ ಬೇಡಿಕೆಗಳಷ್ಟೇ ಈ ಪಟ್ಟಿಯಲ್ಲಿ ಇಲ್ಲ. ಇದರಲ್ಲಿ ರೈತರು, ಮಹಿಳೆಯರು, ದಲಿತರು, ಕೃಷಿಕಾರ್ಮಿಕರು ಹೀಗೆ ನಾನಾ ದುಡಿಯುವ ವರ್ಗದವರ ಬೇಡಿಕೆಗಳಿವೆ. ಇವುಗಳ ಈಡೇರಿಕೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹೋರಾಟ ನಡೆಸಬೇಕು ಎಂದು ಅವರು ತಿಳಿಸಿದರು.</p>.<p>ಈ ಹೋರಾಟಕ್ಕೆ ಒಗ್ಗಟ್ಟು ಬೇಕೇ ಬೇಕು. ಹಾಗಾಗಿ, ಎಲ್ಲರೂ ತಮ್ಮ ತಮ್ಮ ಕಾರ್ಖಾನೆಗಳಲ್ಲಿ ಮೊದಲು ಒಗ್ಗಟ್ಟಾಗಬೇಕು. ಆಗ ಇಡೀ ದೇಶದ ಕಾರ್ಮಿಕರಲ್ಲಿ ಒಗ್ಗಟ್ಟು ಸ್ಥಾಪನೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.</p>.<p>ಈಗಾಗಲೇ ಕೇಂದ್ರ ಸರ್ಕಾರ ಬಜೆಟ್ನಲ್ಲಿ ‘ಫಿಕ್ಸಡ್ ಟರ್ಮ್ ಎಂಪ್ಲಾಯ್ಮೆಂಟ್’ನ್ನು ಜಾರಿಗೊಳಿಸಿದೆ. ಸರ್ಕಾರವೇ ಬಂಡವಾಳಷಾಹಿಗಳಿಗೆ ಪರವಾದ ಕಾಯಿದೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಶೇ 92ರಷ್ಟು ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನೂ ನೀಡದೇ ವಂಚಿಸುತ್ತಿದೆ ಎಂದು ಅವರು ಆರೋಪಿಸಿದರು.</p>.<p>ಮೋದಿ ಚಹಾ ಮಾರುತ್ತಿದ್ದರೆ, ಇಲ್ಲವೇ, ರಾಹುಲ್ಗಾಂಧಿ ಭಾರತೀಯ ಪ್ರಜೆಯೇ ಅಥವಾ ಇಟಲಿಯ ಪ್ರಜೆಯೇ ಎಂಬ ಚರ್ಚೆಯೇ ಮುನ್ನೆಲೆಗೆ ಬಂದಿದೆ. ಯಾರೊಬ್ಬರು ದುಡಿಯುವ ವರ್ಗದವರ ಬವಣೆಯ ಕುರಿತು ಮಾತನಾಡುತ್ತಿಲ್ಲ. ಕಾರ್ಮಿಕರ ಪರವಾದ ಧೋರಣೆಯನ್ನು ವ್ಯಕ್ತಪಡಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಬ್ಯಾಂಕು, ವಿಮೆ, ಬಿಎಸ್ಎನ್ಎಲ್, ಅಂಚೆ ಹಾಗೂ ಇತರ ಸಂಘಟನೆಗಳ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.</p>.<p>ಅಂಗನವಾಡಿ ನೌಕರರ ಸಂಘದ ಮುಖಂಡ ಜಗನ್ನಾಥ, ಎಐಯುಟಿಯುಸಿ ಮುಖಂಡ ಯಶೋಧರ್, ಸಿಐಟಿಯು ತಾಲ್ಲೂಕು ಘಟಕದ ಅಧ್ಯಕ್ಷ ಅಣ್ಣಪ್ಪ ಸೇರಿದಂತೆ ಹಲವು ಮುಖಂಡರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>2 ಕೋಟ್ಗಳಿವೆ...</p>.<p>ಮೈಸೂರು: ಮೇ ದಿನಾಚರಣೆ ಪ್ರಯುಕ್ತ ವಿವಿಧ ಎಡಪಕ್ಷಗಳ ನೇತೃತ್ವದಲ್ಲಿ ಕಾರ್ಮಿಕರು ನಗರದಲ್ಲಿ ಬುಧವಾರ ಬೃಹತ್ ಜಾಥಾ ನಡೆಸಿದರು.</p>.<p>ಪುರಭವನದಿಂದ ಹೊರಟ ನೂರಾರು ಕಾರ್ಮಿಕರು ಕೆಂಬಾವುಟಗಳನ್ನು ಹಿಡಿದು, ಕೆಂಪು ಟೋಪಿ ಧರಿಸಿ, ಬಂಡವಾಳಷಾಹಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.</p>.<p>ವಿವಿಧ ಸಂಘಟನೆಗಳ ಬ್ಯಾನರ್ಗಳನ್ನು ಹಿಡಿದ ಕಾರ್ಮಿಕರು ಸುಬ್ಬರಾಯರಕೆರೆಯ ಸ್ವಾತಂತ್ರ್ಯ ಉದ್ಯಾನಕ್ಕೆ ಬಂದು ಸಮಾವೇಶ ನಡೆಸಿದರು.</p>.<p>ಸಮಾವೇಶದಲ್ಲಿ ಮಾತನಾಡಿದ ಎಐಟಿಯುಸಿ ಮುಖಂಡ ಶೇಷಾದ್ರಿ, ‘ಪ್ರಭುತ್ವದ ವಿರುದ್ದ ಮತ್ತು ಬಂಡವಾಳಷಾಹಿ ವಿರುದ್ಧ ಮುಂಬರುವ ದಿನಗಳಲ್ಲಿ ಬೃಹತ್ ಹೋರಾಟ ನಡೆಸಬೇಕಿದೆ. ಹಾಗಾಗಿ, ಕಾರ್ಮಿಕರು ಈಗಿನಿಂದಲೇ ಮಾನಸಿಕವಾಗಿ ಹೋರಾಟಕ್ಕೆ ಅಣಿಯಾಗಿರಬೇಕು’ ಎಂದು ಕರೆ ನೀಡಿದರು.</p>.<p>‘ವಿವಿಧ ಕಾರ್ಮಿಕ ಸಂಘಟನೆಗಳು ಈಗಾಗಲೇ 44 ಪ್ರಮುಖ ಬೇಡಿಕೆಗಳನ್ನು ಸಿದ್ಧಪಡಿಸಿಕೊಂಡಿವೆ. ಚುನಾವಣೆಯಲ್ಲಿ ಯಾರು ಜಯಶಾಲಿಯಾಗುತ್ತಾರೆ ಎಂಬುದು ನಮಗೆ ಮುಖ್ಯ ಅಲ್ಲ. ಯಾರೇ ಅಧಿಕಾರಕ್ಕೆ ಬಂದರೂ ಅವರ ಮುಂದೆ ಈ ಬೇಡಿಕೆಗಳನ್ನು ಮಂಡಿಸಲಾಗುವುದು’ ಎಂದು ಹೇಳಿದರು.</p>.<p>ಕಾರ್ಮಿಕ ವರ್ಗದ ಬೇಡಿಕೆಗಳಷ್ಟೇ ಈ ಪಟ್ಟಿಯಲ್ಲಿ ಇಲ್ಲ. ಇದರಲ್ಲಿ ರೈತರು, ಮಹಿಳೆಯರು, ದಲಿತರು, ಕೃಷಿಕಾರ್ಮಿಕರು ಹೀಗೆ ನಾನಾ ದುಡಿಯುವ ವರ್ಗದವರ ಬೇಡಿಕೆಗಳಿವೆ. ಇವುಗಳ ಈಡೇರಿಕೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹೋರಾಟ ನಡೆಸಬೇಕು ಎಂದು ಅವರು ತಿಳಿಸಿದರು.</p>.<p>ಈ ಹೋರಾಟಕ್ಕೆ ಒಗ್ಗಟ್ಟು ಬೇಕೇ ಬೇಕು. ಹಾಗಾಗಿ, ಎಲ್ಲರೂ ತಮ್ಮ ತಮ್ಮ ಕಾರ್ಖಾನೆಗಳಲ್ಲಿ ಮೊದಲು ಒಗ್ಗಟ್ಟಾಗಬೇಕು. ಆಗ ಇಡೀ ದೇಶದ ಕಾರ್ಮಿಕರಲ್ಲಿ ಒಗ್ಗಟ್ಟು ಸ್ಥಾಪನೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.</p>.<p>ಈಗಾಗಲೇ ಕೇಂದ್ರ ಸರ್ಕಾರ ಬಜೆಟ್ನಲ್ಲಿ ‘ಫಿಕ್ಸಡ್ ಟರ್ಮ್ ಎಂಪ್ಲಾಯ್ಮೆಂಟ್’ನ್ನು ಜಾರಿಗೊಳಿಸಿದೆ. ಸರ್ಕಾರವೇ ಬಂಡವಾಳಷಾಹಿಗಳಿಗೆ ಪರವಾದ ಕಾಯಿದೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಶೇ 92ರಷ್ಟು ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನೂ ನೀಡದೇ ವಂಚಿಸುತ್ತಿದೆ ಎಂದು ಅವರು ಆರೋಪಿಸಿದರು.</p>.<p>ಮೋದಿ ಚಹಾ ಮಾರುತ್ತಿದ್ದರೆ, ಇಲ್ಲವೇ, ರಾಹುಲ್ಗಾಂಧಿ ಭಾರತೀಯ ಪ್ರಜೆಯೇ ಅಥವಾ ಇಟಲಿಯ ಪ್ರಜೆಯೇ ಎಂಬ ಚರ್ಚೆಯೇ ಮುನ್ನೆಲೆಗೆ ಬಂದಿದೆ. ಯಾರೊಬ್ಬರು ದುಡಿಯುವ ವರ್ಗದವರ ಬವಣೆಯ ಕುರಿತು ಮಾತನಾಡುತ್ತಿಲ್ಲ. ಕಾರ್ಮಿಕರ ಪರವಾದ ಧೋರಣೆಯನ್ನು ವ್ಯಕ್ತಪಡಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಬ್ಯಾಂಕು, ವಿಮೆ, ಬಿಎಸ್ಎನ್ಎಲ್, ಅಂಚೆ ಹಾಗೂ ಇತರ ಸಂಘಟನೆಗಳ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.</p>.<p>ಅಂಗನವಾಡಿ ನೌಕರರ ಸಂಘದ ಮುಖಂಡ ಜಗನ್ನಾಥ, ಎಐಯುಟಿಯುಸಿ ಮುಖಂಡ ಯಶೋಧರ್, ಸಿಐಟಿಯು ತಾಲ್ಲೂಕು ಘಟಕದ ಅಧ್ಯಕ್ಷ ಅಣ್ಣಪ್ಪ ಸೇರಿದಂತೆ ಹಲವು ಮುಖಂಡರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>