ಕೇರಳ ಮೂಲದವರು ಗುರುಸ್ವಾಮಿ ಅವರ ಜಮೀನನ್ನು 2 ವರ್ಷದ ಅವಧಿಗೆ ಭೋಗ್ಯಕ್ಕೆ ಪಡೆದಿದ್ದು, 2 ವರ್ಷಗಳಿಂದ ಈ ಜಮೀನಿನಲ್ಲಿ ಪ್ರಸನ್ನನ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮಂಗಳವಾರ ರಾತ್ರಿ 9 ಗಂಟೆ ಸಮಯದಲ್ಲಿ ಪಕ್ಕದ ಜಮೀನಿಂದ ಊಟ ಮಾಡಲು ತೆರಳಿದ್ದ ವೇಳೆ, ನಿಶಾದ್ ಎಂಬಾತ ಹಾರಿಸಿದ ಗುಂಡು ಪ್ರಸನ್ನನ್ ಕಾಲಿಗೆ ತಗು ಲಿದೆ. ರಕ್ತಸ್ರಾವದಿಂದ ಬಳಲಿದ್ದ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿ ಸಿದ್ದು, ಪರೀಕ್ಷಿಸಿದ ವೈದ್ಯರು ಪ್ರಸನ್ನನ್ ಮೃತ ಪಟ್ಟಿರುವುದನ್ನು ಧೃಡಪಡಿಸಿದರು.