‘ಒಬ್ಬ ಕನ್ನಡಿಗ ಜಿಲ್ಲಾಧಿಕಾರಿಯನ್ನು ಕೇವಲ 28 ದಿನಗಳ ಒಳಗಾಗಿ ಎತ್ತಂಗಡಿ ಮಾಡಿಸಿ ನೀವು ಮೈಸೂರಿಗೆ ಡಿಸಿಯಾಗಿ ಬಂದಿರುವುದು ಸುಳ್ಳಾ, ಈ ಹಿಂದೆ ಹಾಸನದಿಂದ ವರ್ಗಾವಣೆಯಾದಾಗ ತಕ್ಷಣ ಸಿಎಟಿ ಮೊರೆಹೋಗಿ ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದೀರಿ. ಆದರೆ ಈಗ ತೀರ್ಪು ಬರದಂತೆ ಸಿಎಟಿ ಮೇಲೆ ಒತ್ತಡ ಹೇರಿಲ್ಲವೇ, ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಪಾಲ್ಗೊಳ್ಳದೆ, ಬಂಡೀಪುರ ರೆಸಾರ್ಟ್ಗೆ ಹೋದದ್ದು ಸುಳ್ಳಾ’ ಎಂದು ಪ್ರಶ್ನೆಗಳ ಸುರಿಮಳೆಗೈದರು.