ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ವಲಯ ಅರಣ್ಯ ಅಧಿಕಾರಿ ದೇವರಾಜು, 'ಬೆಮಲ್ ಸಮೀಪ ಚಿರತೆ ಇರುವುದು ಇದೇ ಮೊದಲೇನಲ್ಲ. ಹಿಂದೆಯೂ ಸಾಕಷ್ಟು ಬಾರಿ ಇಲ್ಲಿ ಚಿರತೆ ಕಾಣಿಸಿಕೊಂಡಿದೆ. ಚಿರತೆ ಪತ್ತೆಗೆ ಬೆಮಲ್ ಆವರಣದಲ್ಲಿ ಬೋನು ಇಡಲಾಗಿದೆ. ಮನುಷ್ಯರಿಗೆ ಚಿರತೆಗಳು ತೊಂದರೆ ಮಾಡುವುದಿಲ್ಲ. ಸಾರ್ವಜನಿಕರು ಭಯಗೊಳ್ಳಬಾರದು.' ಎಂದು ತಿಳಿಸಿದ್ದಾರೆ.