‘ನಾಲ್ವಡಿ ತಮ್ಮ ಸಂಸ್ಥಾನದಲ್ಲಿ ಮೀಸಲಾತಿ ಜಾರಿಗೆ ಮುಂದಾದಾಗ, ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಇದನ್ನು ವಿರೋಧಿಸಿ ರಾಜೀನಾಮೆ ನೀಡಿದರು. ಮೀಸಲಾತಿ ಜಾರಿ ವಿರೋಧಿ ಗುಂಪು ವಿಶ್ವೇಶ್ವರಯ್ಯನವರನ್ನು ಪ್ರತಿನಿಧಿಕರಿಸಿ, ಹಲವು ವರ್ಷಗಳ ಕಾಲ ನಾಲ್ವಡಿಯ ಸಾಧನೆ ಬೆಳಕಿಗೆ ಬಾರದಂತೆ ನೋಡಿಕೊಂಡಿತು. ಸ್ವತಃ ವಿಶ್ವೇಶ್ವರಯ್ಯನವರೇ ರಾಜರೇ ನನಗೆ ವಿಶ್ವವಿದ್ಯಾಲಯ, ಬ್ಯಾಂಕ್, ಕನ್ನಂಬಾಡಿ, ಕಸಾಪ ಕಟ್ಟುವಂತೆ ಹೇಳಿದ್ದರು ಎಂದು ಬರೆದುಕೊಂಡಿದ್ದಾರೆ’ ಎಂದು ಬರಗೂರು ಹೇಳಿದರು.