ತಹಶೀಲ್ದಾರ್ ಮಹೇಶ್ ಕುಮಾರ್ ಮಾತನಾಡಿ, ‘1993ರಲ್ಲಿ ಶ್ರೀಕಂಠೇಶ್ವರ ದೇವಾಲಯಕ್ಕೆ ಸೇರಿದ ಅರಮನೆ ಮೈದಾನದ ರಕ್ಷಣೆಗಾಗಿ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿತ್ತು. ಕಾರಣಾಂತರಗಳಿಂದ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿತ್ತು. ಈ ಜಾಗದಲ್ಲಿ ದೇವಾಲಯಕ್ಕೆ ಸೇರಿರುವ ವಾಹನ ಮಂಟಪವಿದೆ. ಕಟ್ಟಡದಲ್ಲಿ ಮರದ ಕೆತ್ತನೆಯ ಆನೆ ಅಂಬಾರಿ, ಕುದುರೆ, ಬಸವನ ರಥ ಮುಂತಾದ ಅಮೂಲ್ಯ ಶಿಲ್ಪಗಳಿವೆ’ ಎಂದರು.