ಡಿ. 13ರಂದು ಸಂಜೆ 6ಕ್ಕೆ ವಿದ್ವಾನರಾದ ಜಿ.ಎಸ್.ರಾಮಾನುಜಂ, ವಿ.ಎಸ್.ರಮೇಶ್, ಕಾಂಚನಾ ಈಶ್ವರ ಭಟ್, ಎ.ರಾಧೇಶ್, ಎಂ.ಎಲ್.ವಾದೀರಾಜ್ ವಾದ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಪಿಟೀಲಿನಲ್ಲಿ ಸಿ.ಎನ್.ತ್ಯಾಗರಾಜು, ಕೊಳಲಿನಲ್ಲಿ ಸ್ಮಿತಾ ಶ್ರೀಕಿರಣ್ ಸಹಕರಿಸಲಿದ್ದಾರೆ. ಡಿ. 14ರಂದು ಸಂಜೆ 6ಕ್ಕೆ ಕರ್ನಾಟಕ ಸಂಗೀತ ಗಾಯನ ಕಾರ್ಯಕ್ರಮ ಇರಲಿದೆ. ವಿದ್ವಾನ್ ಜಿ.ಎನ್.ನಾಗಮಣಿ ಶ್ರೀನಾಥ್ ನಡೆಸಿಕೊಡಲಿದ್ದಾರೆ. ಪಿಟೀಲಿನಲ್ಲಿ ಎನ್.ಎನ್.ಗಣೇಶ್ಕುಮಾರ್, ಖಂಜಿರಾದಲ್ಲಿ ಬಿ.ಸಿ.ಮಂಜುನಾಥ್, ಸುನಾದ್ ಆನೂರ್ ಸಹಕರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.