ಮೈಸೂರು: ತಿ.ನರಸೀಪುರದ ಖಾಸಗಿ ಬಸ್ನಿಲ್ದಾಣದ ವೃತ್ತದ ಬಳಿ ಮಾರ್ಚ್ 27ರಂದು ಪೊಲೀಸ್ ವಾಹನ ಚಾಲಕ ದಯಾನಂದ ಅವರು ತಮಗೆ ಸಿಕ್ಕಿದ ₹ 50 ಸಾವಿರ ನಗದನ್ನು ಹಣ ಕಳೆದುಕೊಂಡವರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಇವರು ಹಣ ಸಿಕ್ಕಿದ ತಕ್ಷಣ ಠಾಣೆಗೆ ತಲುಪಿಸಿದರು. ನಂತರ, ತ್ರಿವೇಣಿ ನಗರದ ನಿವಾಸಿ ವಿವೇಕ್ ಎಂಬುವವರು ಹಣವನ್ನು ಕಳೆದುಕೊಂಡಿದ್ದು, ಪತ್ತೆ ಮಾಡಿ ಕೊಡುವಂತೆ ದೂರು ನೀಡಲು ಬಂದರು. ಇವರಿಗೆ ಹಣವನ್ನು ಮರಳಿಸಲಾಯಿತು.
ಹಣವನ್ನು ಪ್ರಾಮಾಣಿಕವಾಗಿ ಒಪ್ಪಿಸಿದ ದಯಾನಂದ ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರು ₹ 5 ಸಾವಿರ ನಗದು ಬಹುಮಾನ ನೀಡಿದ್ದಾರೆ.