ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಮಾಣಿಕತೆ ಮೆರೆದ ಪೊಲೀಸ್ ಸಿಬ್ಬಂದಿ

Last Updated 10 ಏಪ್ರಿಲ್ 2020, 12:27 IST
ಅಕ್ಷರ ಗಾತ್ರ

ಮೈಸೂರು: ತಿ.ನರಸೀಪುರದ ಖಾಸಗಿ ಬಸ್‌ನಿಲ್ದಾಣದ ವೃತ್ತದ ಬಳಿ ಮಾರ್ಚ್ 27ರಂದು ಪೊಲೀಸ್ ವಾಹನ ಚಾಲಕ ದಯಾನಂದ ಅವರು ತಮಗೆ ಸಿಕ್ಕಿದ ₹ 50 ಸಾವಿರ ನಗದನ್ನು ಹಣ ಕಳೆದುಕೊಂಡವರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಇವರು ಹಣ ಸಿಕ್ಕಿದ ತಕ್ಷಣ ಠಾಣೆಗೆ ತಲುಪಿಸಿದರು. ನಂತರ, ತ್ರಿವೇಣಿ ನಗರದ ನಿವಾಸಿ ವಿವೇಕ್ ಎಂಬುವವರು ಹಣವನ್ನು ಕಳೆದುಕೊಂಡಿದ್ದು, ಪತ್ತೆ ಮಾಡಿ ಕೊಡುವಂತೆ ದೂರು ನೀಡಲು ಬಂದರು. ಇವರಿಗೆ ಹಣವನ್ನು ಮರಳಿಸಲಾಯಿತು.

ಹಣವನ್ನು ಪ್ರಾಮಾಣಿಕವಾಗಿ ಒಪ್ಪಿಸಿದ ದಯಾನಂದ ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರು ₹ 5 ಸಾವಿರ ನಗದು ಬಹುಮಾನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT