<p><strong>ಮೈಸೂರು: </strong>‘ದೇಶವನ್ನು ಬಿಕ್ಕಟ್ಟುಗಳಿಂದ ಕಾಯ್ದವರು, ಮುನ್ನಡೆಸಿದವರು ಬಡವರೇ ಹೊರತು ಶ್ರೀಮಂತರಲ್ಲ. 60 ಕೋಟಿ ಜನರ ದಿನದ ಗಳಿಕೆ ₹ 30 ಆಗಿರುವಾಗ ಬಡವರಿಗಾಗಿ, ಅವರಿಗೆ ಸುಸ್ಥಿರ ಬದುಕನ್ನು ಕಟ್ಟಿಕೊಡುವುದಕ್ಕಾಗಿ ಯುವ ಸಮುದಾಯವು ಹಂಬಲಿಸಬೇಕು’ ಎಂದು ಸೆಲ್ಕೋ ಇಂಡಿಯಾದ ಹರೀಶ್ ಹಂದೆ ಕರೆ ನೀಡಿದರು.</p>.<p>ಜೆಎಸ್ಎಸ್ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಸುವರ್ಣ ಮಹೋತ್ಸವ ದತ್ತಿ ಉಪನ್ಯಾಸ‘ದಲ್ಲಿ ‘ಬಡತನ ಮತ್ತು ಸುಸ್ಥಿರತೆ’ ಕುರಿತು ವಿದ್ಯಾರ್ಥಿಗಳು– ಶಿಕ್ಷಕರನ್ನುದ್ದೇಶಿಸಿ ಅವರು ಮಾತನಾಡಿದರು.</p>.<p>‘ಸರ್ಕಾರದಿಂದ ಸಾಲಮನ್ನಾ ಸೇರಿದಂತೆ ಇತರ ಯೋಜನೆಗಳಡಿ ಬಡವರಿಗೆ ಶೇ 2 ಸಬ್ಸಿಡಿ ಸಿಕ್ಕರೆ, ಮಧ್ಯಮ ವರ್ಗದವರಿಗೆ ಅಗ್ಗದ ವಿಮಾನಯಾನ, ರಸ್ತೆ ಸೇರಿದಂತೆ ವಿವಿಧ ಮೂಲಸೌಕರ್ಯ ಸೇವೆಗಳಡಿ ಶೇ 6 ಸಬ್ಸಿಡಿ ಸಿಗುತ್ತದೆ. ಆದರೆ, ಮಧ್ಯಮವರ್ಗವು ಬಡವರನ್ನೇ ದೂರುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಮಧ್ಯಮ ವರ್ಗದ ಮಕ್ಕಳು ಐಐಟಿ, ಐಐಎಂ, ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಉಚಿತ ಶಿಕ್ಷಣ ಪಡೆಯುತ್ತಿರುವುದು ಬಡವರ ಬೆವರಿನ ತೆರಿಗೆಯಲ್ಲಿ ಎಂಬುದನ್ನು ನೆನಪಿಡಬೇಕು. ವಿಪರ್ಯಾಸವೆಂದರೆ ಅಲ್ಲಿ ಕಲಿತವರು ವಿದೇಶಗಳಿಗೆ ಹೋಗುತ್ತಾರೆ. ಇಲ್ಲಿ ಅವರಿಗಾಗಿ ದುಡಿದವರನ್ನು ಮರೆಯುತ್ತಾರೆ’ ಎಂದರು.</p>.<p>ಪರಿಹಾರೋಪಾಯ ನೀಡಿ: ‘ಜಗತ್ತಿನ ಎಲ್ಲ ಸಮಸ್ಯೆಗಳು ನಮ್ಮಲ್ಲಿವೆಯೆಂದು ದೂರುವುದಕ್ಕಿಂತ ಪ್ರತಿ ಸಮಸ್ಯೆಗೂ ಐದು ಪರಿಹಾರೋಪಾಯ ನೀಡುವತ್ತ ಎಲ್ಲರೂ ಮುಂದಾದರೆ, ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವ ಸೂಪರ್ ಪವರ್ ದೇಶ ಭಾರತವೇ ಆಗಲಿದೆ’ ಎಂದು ಹಂದೆ ಹೇಳಿದರು.</p>.<p>‘ಪ್ರತಿಯೊಂದು ರಾಜ್ಯದ ಸಮಸ್ಯೆಗಳಿಗೆ ಪರಿಹಾರವನ್ನೊದಗಿಸುವ ಮಾರ್ಗಗಳನ್ನು ಕಂಡುಹಿಡಿದರೆ ಜಗತ್ತಿನ ಹಲವು ದೇಶಗಳನ್ನು ಬಿಕ್ಕಟ್ಟುಗಳಿಂದ ಪಾರು ಮಾಡಬಹುದು. ಭಾರತದ ಒಂದೊಂದು ರಾಜ್ಯವೂ ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಯೋಗಶಾಲೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಉತ್ತರ ಭಾರತದ ಗಂಗಾ ನದಿ ಬಯಲಿನ ಸಮಸ್ಯೆಗಳ ಪರಿಹಾರಗಳು ಈಜಿಪ್ಟ್ನ ನೈಲ್ನ ಸಮಸ್ಯೆಯನ್ನು ಮುಕ್ತಗೊಳಿಸಿದರೆ; ಒಡಿಶಾದ ಚಂಡಮಾರುತ, ಮಹಾರಾಷ್ಟ್ರದ ಬರ ಸಮಸ್ಯೆ ಪರಿಹರಿಸಿದರೆ ಫಿಲಿಪ್ಪೀನ್ಸ್, ತಾಂಜೇನಿಯಾದ ಸಮಸ್ಯೆಗಳಿಗೆ ಮುಕ್ತಗೊಳಿಸಲು ದಾರಿ ಮಾಡಿಕೊಟ್ಟಂತಾಗುತ್ತದೆ’ ಎಂದು ಉದಾಹರಿಸಿದರು.</p>.<p>ವಿಡಬ್ಲ್ಯೂಎಫ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಬಿ.ಆರ್. ಪೈ ಅವರು ಶ್ರೀಎಂ ಅವರ ‘ಸಾಧನಾ – ಪಾಥ್ ಆಫ್ ಲಿಬರೇಷನ್’ ಕೃತಿ ಬಿಡುಗಡೆ ಮಾಡಿದರು.</p>.<p>ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>‘ದೇಶವನ್ನು ಬಿಕ್ಕಟ್ಟುಗಳಿಂದ ಕಾಯ್ದವರು, ಮುನ್ನಡೆಸಿದವರು ಬಡವರೇ ಹೊರತು ಶ್ರೀಮಂತರಲ್ಲ. 60 ಕೋಟಿ ಜನರ ದಿನದ ಗಳಿಕೆ ₹ 30 ಆಗಿರುವಾಗ ಬಡವರಿಗಾಗಿ, ಅವರಿಗೆ ಸುಸ್ಥಿರ ಬದುಕನ್ನು ಕಟ್ಟಿಕೊಡುವುದಕ್ಕಾಗಿ ಯುವ ಸಮುದಾಯವು ಹಂಬಲಿಸಬೇಕು’ ಎಂದು ಸೆಲ್ಕೋ ಇಂಡಿಯಾದ ಹರೀಶ್ ಹಂದೆ ಕರೆ ನೀಡಿದರು.</p>.<p>ಜೆಎಸ್ಎಸ್ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಸುವರ್ಣ ಮಹೋತ್ಸವ ದತ್ತಿ ಉಪನ್ಯಾಸ‘ದಲ್ಲಿ ‘ಬಡತನ ಮತ್ತು ಸುಸ್ಥಿರತೆ’ ಕುರಿತು ವಿದ್ಯಾರ್ಥಿಗಳು– ಶಿಕ್ಷಕರನ್ನುದ್ದೇಶಿಸಿ ಅವರು ಮಾತನಾಡಿದರು.</p>.<p>‘ಸರ್ಕಾರದಿಂದ ಸಾಲಮನ್ನಾ ಸೇರಿದಂತೆ ಇತರ ಯೋಜನೆಗಳಡಿ ಬಡವರಿಗೆ ಶೇ 2 ಸಬ್ಸಿಡಿ ಸಿಕ್ಕರೆ, ಮಧ್ಯಮ ವರ್ಗದವರಿಗೆ ಅಗ್ಗದ ವಿಮಾನಯಾನ, ರಸ್ತೆ ಸೇರಿದಂತೆ ವಿವಿಧ ಮೂಲಸೌಕರ್ಯ ಸೇವೆಗಳಡಿ ಶೇ 6 ಸಬ್ಸಿಡಿ ಸಿಗುತ್ತದೆ. ಆದರೆ, ಮಧ್ಯಮವರ್ಗವು ಬಡವರನ್ನೇ ದೂರುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಮಧ್ಯಮ ವರ್ಗದ ಮಕ್ಕಳು ಐಐಟಿ, ಐಐಎಂ, ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಉಚಿತ ಶಿಕ್ಷಣ ಪಡೆಯುತ್ತಿರುವುದು ಬಡವರ ಬೆವರಿನ ತೆರಿಗೆಯಲ್ಲಿ ಎಂಬುದನ್ನು ನೆನಪಿಡಬೇಕು. ವಿಪರ್ಯಾಸವೆಂದರೆ ಅಲ್ಲಿ ಕಲಿತವರು ವಿದೇಶಗಳಿಗೆ ಹೋಗುತ್ತಾರೆ. ಇಲ್ಲಿ ಅವರಿಗಾಗಿ ದುಡಿದವರನ್ನು ಮರೆಯುತ್ತಾರೆ’ ಎಂದರು.</p>.<p>ಪರಿಹಾರೋಪಾಯ ನೀಡಿ: ‘ಜಗತ್ತಿನ ಎಲ್ಲ ಸಮಸ್ಯೆಗಳು ನಮ್ಮಲ್ಲಿವೆಯೆಂದು ದೂರುವುದಕ್ಕಿಂತ ಪ್ರತಿ ಸಮಸ್ಯೆಗೂ ಐದು ಪರಿಹಾರೋಪಾಯ ನೀಡುವತ್ತ ಎಲ್ಲರೂ ಮುಂದಾದರೆ, ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವ ಸೂಪರ್ ಪವರ್ ದೇಶ ಭಾರತವೇ ಆಗಲಿದೆ’ ಎಂದು ಹಂದೆ ಹೇಳಿದರು.</p>.<p>‘ಪ್ರತಿಯೊಂದು ರಾಜ್ಯದ ಸಮಸ್ಯೆಗಳಿಗೆ ಪರಿಹಾರವನ್ನೊದಗಿಸುವ ಮಾರ್ಗಗಳನ್ನು ಕಂಡುಹಿಡಿದರೆ ಜಗತ್ತಿನ ಹಲವು ದೇಶಗಳನ್ನು ಬಿಕ್ಕಟ್ಟುಗಳಿಂದ ಪಾರು ಮಾಡಬಹುದು. ಭಾರತದ ಒಂದೊಂದು ರಾಜ್ಯವೂ ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಯೋಗಶಾಲೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಉತ್ತರ ಭಾರತದ ಗಂಗಾ ನದಿ ಬಯಲಿನ ಸಮಸ್ಯೆಗಳ ಪರಿಹಾರಗಳು ಈಜಿಪ್ಟ್ನ ನೈಲ್ನ ಸಮಸ್ಯೆಯನ್ನು ಮುಕ್ತಗೊಳಿಸಿದರೆ; ಒಡಿಶಾದ ಚಂಡಮಾರುತ, ಮಹಾರಾಷ್ಟ್ರದ ಬರ ಸಮಸ್ಯೆ ಪರಿಹರಿಸಿದರೆ ಫಿಲಿಪ್ಪೀನ್ಸ್, ತಾಂಜೇನಿಯಾದ ಸಮಸ್ಯೆಗಳಿಗೆ ಮುಕ್ತಗೊಳಿಸಲು ದಾರಿ ಮಾಡಿಕೊಟ್ಟಂತಾಗುತ್ತದೆ’ ಎಂದು ಉದಾಹರಿಸಿದರು.</p>.<p>ವಿಡಬ್ಲ್ಯೂಎಫ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಬಿ.ಆರ್. ಪೈ ಅವರು ಶ್ರೀಎಂ ಅವರ ‘ಸಾಧನಾ – ಪಾಥ್ ಆಫ್ ಲಿಬರೇಷನ್’ ಕೃತಿ ಬಿಡುಗಡೆ ಮಾಡಿದರು.</p>.<p>ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>