<p>ಮೈಸೂರು: ಇಲ್ಲಿನ ಮಹಾರಾಣಿ ಮಾದರಿ (ಎನ್ಟಿಎಂ) ಶಾಲೆ ಉಳಿಸಿ ಹೋರಾಟದ ಒಕ್ಕೂಟವು ಶಾಲೆಯ ಮುಂಭಾಗ ನಡೆಸುತ್ತಿರುವ ಪ್ರತಿಭಟನೆಯು ಮಂಗಳವಾರ ಒಂದು ತಿಂಗಳು ಪೂರೈಸಿತು. ಒಕ್ಕೂಟದ ಸದಸ್ಯರೊಂದಿಗೆ ದೇವರಾಜ ಮಾರುಕಟ್ಟೆ, ಮಂಡಿ, ವಾಣಿವಿಲಾಸ ಮಾರುಕಟ್ಟೆಯ ವರ್ತಕರು ಮತ್ತು ಮಾಲೀಕರು ಪ್ರತಿಭಟನೆ ನಡೆಸಿದರು.</p>.<p>ಬೆಳ್ಳಾಳೆ ಬೆಟ್ಟೇಗೌಡ ಹಾಗೂ ಹೊಸಳ್ಳಿ ಶಿವು ಅವರು ‘ಮಾತು ಕೇಳು ಅಣ್ಣಯ್ಯ... ಮಾತು ಕೇಳೋ... ಕುತೂಂಡು ಮಾತನಾಡುವರ ಮಾತು ಕೇಳೋ’ ಎಂಬ ಗೀತೆಯನ್ನು ಹಾಡಿ ಗಮನ ಸೆಳೆದರು.</p>.<p>‘ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಮಾತು ಉಳಿಯಲಿ’ ಎಂಬ ಭಿತ್ತಿಫಲಕಗಳನ್ನು ಹಿಡಿದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಪರಿಸರವಾದಿ ಭಾನುಮೋಹನ್ ಅವರು ಸ್ವಾಮಿ ವಿವೇಕಾನಂದ ಅವರ ಧಿರಿಸಿನಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ವಿಶೇಷ ಎನಿಸಿತ್ತು.</p>.<p>ಬೆಳ್ಳಾಳೆ ಬೆಟ್ಟೆಗೌಡ ಮಾತನಾಡಿ, ‘ಶಾಲೆಯ ಸಮಾಧಿಯ ಮೇಲೆ ವಿವೇಕಾನಂದ ಅವರ ಸ್ಮಾರಕ ನಿರ್ಮಿಸಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ವಿವೇಕಾನಂದ ಅವರ ಆಶಯದೊಂದಿಗೆ ಆರಂಭವಾದ ಶಾಲೆ ಇದು ಎಂಬುದೂ ಇವರಿಗೆ ಅರ್ಥವಾಗುತ್ತಿಲ್ಲವೇ’ ಎಂದು ಪ್ರಶ್ನಿಸಿದರು.</p>.<p>ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘದ ಅಧ್ಯಕ್ಷ ಪೈಲ್ವಾನ್ ಮಹದೇವು, ಮಂಡಿ ಮಾರುಕಟ್ಟೆಯ ಅಧ್ಯಕ್ಷ ಪ್ರೇಮ್ ಕುಮಾರ್, ವಾಣಿವಿಲಾಸ ಮಾರುಕಟ್ಟೆಯ ಶಿವಕುಮಾರ್, ವರ್ತಕರಾದ ಮನೀಶ್ಕುಮಾರ್, ಕುಮಾರ್, ಹೀರಾಚಂದ್, ಹೋರಾಟ<br />ಗಾರರಾದ ಪ.ಮಲ್ಲೇಶ್, ಸ.ರ ಸುದರ್ಶನ, ಪುರುಷೋತ್ತಮ್,ಮಾಳವಿಕ ಗುಬ್ಬಿವಾಣಿ, ಅರಸು ಮಹಿಳಾ ಜಾಗೃತಿ ಸಭಾ ಇಂದುಕಲಾ ಅರಸ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಇಲ್ಲಿನ ಮಹಾರಾಣಿ ಮಾದರಿ (ಎನ್ಟಿಎಂ) ಶಾಲೆ ಉಳಿಸಿ ಹೋರಾಟದ ಒಕ್ಕೂಟವು ಶಾಲೆಯ ಮುಂಭಾಗ ನಡೆಸುತ್ತಿರುವ ಪ್ರತಿಭಟನೆಯು ಮಂಗಳವಾರ ಒಂದು ತಿಂಗಳು ಪೂರೈಸಿತು. ಒಕ್ಕೂಟದ ಸದಸ್ಯರೊಂದಿಗೆ ದೇವರಾಜ ಮಾರುಕಟ್ಟೆ, ಮಂಡಿ, ವಾಣಿವಿಲಾಸ ಮಾರುಕಟ್ಟೆಯ ವರ್ತಕರು ಮತ್ತು ಮಾಲೀಕರು ಪ್ರತಿಭಟನೆ ನಡೆಸಿದರು.</p>.<p>ಬೆಳ್ಳಾಳೆ ಬೆಟ್ಟೇಗೌಡ ಹಾಗೂ ಹೊಸಳ್ಳಿ ಶಿವು ಅವರು ‘ಮಾತು ಕೇಳು ಅಣ್ಣಯ್ಯ... ಮಾತು ಕೇಳೋ... ಕುತೂಂಡು ಮಾತನಾಡುವರ ಮಾತು ಕೇಳೋ’ ಎಂಬ ಗೀತೆಯನ್ನು ಹಾಡಿ ಗಮನ ಸೆಳೆದರು.</p>.<p>‘ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಮಾತು ಉಳಿಯಲಿ’ ಎಂಬ ಭಿತ್ತಿಫಲಕಗಳನ್ನು ಹಿಡಿದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಪರಿಸರವಾದಿ ಭಾನುಮೋಹನ್ ಅವರು ಸ್ವಾಮಿ ವಿವೇಕಾನಂದ ಅವರ ಧಿರಿಸಿನಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ವಿಶೇಷ ಎನಿಸಿತ್ತು.</p>.<p>ಬೆಳ್ಳಾಳೆ ಬೆಟ್ಟೆಗೌಡ ಮಾತನಾಡಿ, ‘ಶಾಲೆಯ ಸಮಾಧಿಯ ಮೇಲೆ ವಿವೇಕಾನಂದ ಅವರ ಸ್ಮಾರಕ ನಿರ್ಮಿಸಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ವಿವೇಕಾನಂದ ಅವರ ಆಶಯದೊಂದಿಗೆ ಆರಂಭವಾದ ಶಾಲೆ ಇದು ಎಂಬುದೂ ಇವರಿಗೆ ಅರ್ಥವಾಗುತ್ತಿಲ್ಲವೇ’ ಎಂದು ಪ್ರಶ್ನಿಸಿದರು.</p>.<p>ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘದ ಅಧ್ಯಕ್ಷ ಪೈಲ್ವಾನ್ ಮಹದೇವು, ಮಂಡಿ ಮಾರುಕಟ್ಟೆಯ ಅಧ್ಯಕ್ಷ ಪ್ರೇಮ್ ಕುಮಾರ್, ವಾಣಿವಿಲಾಸ ಮಾರುಕಟ್ಟೆಯ ಶಿವಕುಮಾರ್, ವರ್ತಕರಾದ ಮನೀಶ್ಕುಮಾರ್, ಕುಮಾರ್, ಹೀರಾಚಂದ್, ಹೋರಾಟ<br />ಗಾರರಾದ ಪ.ಮಲ್ಲೇಶ್, ಸ.ರ ಸುದರ್ಶನ, ಪುರುಷೋತ್ತಮ್,ಮಾಳವಿಕ ಗುಬ್ಬಿವಾಣಿ, ಅರಸು ಮಹಿಳಾ ಜಾಗೃತಿ ಸಭಾ ಇಂದುಕಲಾ ಅರಸ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>