<p><strong>ಮೈಸೂರು: </strong>‘ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯಡಿ ಬಂದ ₹ 12 ಕೋಟಿ ವಿಚಾರದ ಬಗ್ಗೆ ಪ್ರಶ್ನಿಸಿದ್ದೆ. ಎಲ್ಲವನ್ನು ಮೈಸೂರು ನಗರ ವ್ಯಾಪ್ತಿಗೆ ಬಳಸಿಕೊಂಡಿರಾ? ಯಾವುದಕ್ಕೆ ಖರ್ಚು ಮಾಡಿದ್ದೀರಿ, ಯಾರಿಗೆ ಕೊಟ್ಟಿದ್ದೀರಿ ಎಂದು ಮಾಹಿತಿ ಕೇಳಿದ್ದೆ. ಇದು ತಪ್ಪೇ’ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಶುಕ್ರವಾರ ಇಲ್ಲಿ ಪ್ರಶ್ನಿಸಿದರು.</p>.<p>‘ಎಲ್ಲವನ್ನೂ ನಗರಕ್ಕೆ ಖರ್ಚು ಮಾಡಲಾಗಿದೆ ಎಂಬುದಾಗಿ ಪಾಲಿಕೆ ಆಯುಕ್ತರು ಹೇಳುತ್ತಿದ್ದಾರೆ. ಇದುವರೆಗೆ ಯಾವುದಕ್ಕೂ ಸರಿಯಾದ ಮಾಹಿತಿ ಕೊಟ್ಟಿಲ್ಲ’ ಎಂದರು.</p>.<p>‘ವೈದ್ಯರ ನಡೆ ಹಳ್ಳಿಗಳ ಕಡೆ ಯೋಜನೆಗಾಗಿ ಗ್ರಾಮಾಂತರ ಪ್ರದೇಶಕ್ಕೆ ಸಿಎಸ್ಆರ್ ನಿಧಿ ಬಳಸಿಕೊಳ್ಳಲು ನಿರ್ಧರಿಸಿದ್ದೆ. ಆದರೆ, ಆಯುಕ್ತರು ಕೇವಲ ನಗರದ ಬಗ್ಗೆ ಮಾತನಾಡುತ್ತಿದ್ದಾರೆ. ಮೈಸೂರು, ನಂಜನಗೂಡು ತಾಲ್ಲೂಕಿನ ಕಾರ್ಖಾನೆ, ಕಂಪನಿಗಳಿಂದಲೂ ಸಿಎಸ್ಆರ್ ನಿಧಿ ಬಂದಿದೆ. ಆ ಪ್ರದೇಶಗಳಿಗೂ ನೀಡಬೇಕು ಎಂಬುದಾಗಿ ಅವರ ಬಳಿ ಲೆಕ್ಕ ಕೇಳಿದ್ದೆ’ ಎಂದು ಹೇಳಿದರು.</p>.<p>ಇದನ್ನೂ ಓದಿ:<a href="https://www.prajavani.net/district/mysore/mysore-city-corporation-commissioner-shilpa-nag-and-rohini-sindhuri-issue-in-mysore-district-835912.html" itemprop="url">ಒಬ್ಬರ ಅಹಂನಿಂದ ವ್ಯವಸ್ಥೆ ಹದಗೆಡಬಾರದು: ಸಿಂಧೂರಿ ವಿರುದ್ಧ ಶಿಲ್ಪಾ ಮತ್ತೆ ಆಕ್ರೋಶ </a></p>.<p>‘ಪಾಲಿಕೆಯ ವಾರ್ಡ್ಗಳಲ್ಲಿ ಎಷ್ಟು ಕೊರೊನಾ ಸೋಂಕು ಪ್ರಕರಣಗಳಿವೆ ಎಂಬ ಬಗ್ಗೆಯೂ ಅವರು ಸರಿಯಾದ ಮಾಹಿತಿ ನೀಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಯಾರಿಗೆ ಒತ್ತಡ ಇಲ್ಲ ಹೇಳಿ? ಕೇಂದ್ರದಿಂದ ಹಿಡಿದು ರಾಜ್ಯದವರೆಗೆ ಎಲ್ಲರೂ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ಕಾರ್ಯಕರ್ತರಿಗಿಂತ ಯಾರಿಗೆ ಹೆಚ್ಚು ಒತ್ತಡವಿದೆ? ಕೇಳಿದ ಮಾಹಿತಿಯನ್ನು ಸರಿಯಾಗಿ ನೀಡಬೇಕಲ್ಲವೇ’ ಎಂದು ಕೇಳಿದರು.</p>.<p>‘ನಿಮ್ಮ ಸೀನಿಯರ್ ಮೇಲೆ ಅಸಮಾಧಾನವಿದ್ದರೆ ಕ್ಯಾಮೆರಾ ಮುಂದೆ ಬರುತ್ತೀರಾ? ಸೀನಿಯರ್ ಬಳಿ ಹೇಳಿಕೊಳ್ಳುತ್ತೀರಿ, ಇಲ್ಲವೇ ಲಿಖಿತ ದೂರು ನೀಡುತ್ತೀರಿ. ಎಲ್ಲದಕ್ಕೂ ಒಂದು ವ್ಯವಸ್ಥೆ, ಕ್ರಮ ಎಂಬುದು ಇರುತ್ತದೆ. ಕುಂದುಕೊರತೆ ಹೇಳಿಕೊಳ್ಳಲೂ ವೇದಿಕೆ ಇದೆ. ಆ ವ್ಯವಸ್ಥೆ ಮೀರಿ ಮಾತನಾಡಬಾರದು’ ಎಂದರು.</p>.<p>‘ಶಿಲ್ಪಾನಾಗ್ ಫೆ.15ರಂದು ಮೈಸೂರು ನಗರಕ್ಕೆ ಪಾಲಿಕೆ ಆಯುಕ್ತರಾಗಿ ಬಂದರು. ಇತ್ತೀಚಿನವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಕಳೆದ 15 ದಿನಗಳಲ್ಲಿ ಮಾತ್ರ ಏಕೆ ಸಮಸ್ಯೆ’ ಎಂದು ಪ್ರಶ್ನಿಸಿದರು.</p>.<p>ಇದನ್ನೂ ಓದಿ:<a href="https://www.prajavani.net/district/mysore/mysuru-city-corporation-commissioner-shilpa-nag-resigned-for-her-post-835700.html" itemprop="url">ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ: ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ರಾಜೀನಾಮೆ </a></p>.<p>‘ಅಧಿಕಾರಿಗಳಿಗೆ ಒಂದು ವೇದಿಕೆ ಹಾಗೂ ಹುದ್ದೆಯ ಶ್ರೇಣಿ ಇರುತ್ತದೆ. ಅವರಿಗೆ ಉತ್ತರ ಕೊಡುವುದು ನನ್ನ ಜವಾಬ್ದಾರಿ ಅಲ್ಲ. ಸರ್ಕಾರಕ್ಕೆ ವರದಿ ನೀಡುತ್ತೇನೆ. ಮುಖ್ಯ ಕಾರ್ಯದರ್ಶಿಯ ಗಮನಕ್ಕೂ ತಂದಿದ್ದೇನೆ’ ಎಂದು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>‘ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯಡಿ ಬಂದ ₹ 12 ಕೋಟಿ ವಿಚಾರದ ಬಗ್ಗೆ ಪ್ರಶ್ನಿಸಿದ್ದೆ. ಎಲ್ಲವನ್ನು ಮೈಸೂರು ನಗರ ವ್ಯಾಪ್ತಿಗೆ ಬಳಸಿಕೊಂಡಿರಾ? ಯಾವುದಕ್ಕೆ ಖರ್ಚು ಮಾಡಿದ್ದೀರಿ, ಯಾರಿಗೆ ಕೊಟ್ಟಿದ್ದೀರಿ ಎಂದು ಮಾಹಿತಿ ಕೇಳಿದ್ದೆ. ಇದು ತಪ್ಪೇ’ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಶುಕ್ರವಾರ ಇಲ್ಲಿ ಪ್ರಶ್ನಿಸಿದರು.</p>.<p>‘ಎಲ್ಲವನ್ನೂ ನಗರಕ್ಕೆ ಖರ್ಚು ಮಾಡಲಾಗಿದೆ ಎಂಬುದಾಗಿ ಪಾಲಿಕೆ ಆಯುಕ್ತರು ಹೇಳುತ್ತಿದ್ದಾರೆ. ಇದುವರೆಗೆ ಯಾವುದಕ್ಕೂ ಸರಿಯಾದ ಮಾಹಿತಿ ಕೊಟ್ಟಿಲ್ಲ’ ಎಂದರು.</p>.<p>‘ವೈದ್ಯರ ನಡೆ ಹಳ್ಳಿಗಳ ಕಡೆ ಯೋಜನೆಗಾಗಿ ಗ್ರಾಮಾಂತರ ಪ್ರದೇಶಕ್ಕೆ ಸಿಎಸ್ಆರ್ ನಿಧಿ ಬಳಸಿಕೊಳ್ಳಲು ನಿರ್ಧರಿಸಿದ್ದೆ. ಆದರೆ, ಆಯುಕ್ತರು ಕೇವಲ ನಗರದ ಬಗ್ಗೆ ಮಾತನಾಡುತ್ತಿದ್ದಾರೆ. ಮೈಸೂರು, ನಂಜನಗೂಡು ತಾಲ್ಲೂಕಿನ ಕಾರ್ಖಾನೆ, ಕಂಪನಿಗಳಿಂದಲೂ ಸಿಎಸ್ಆರ್ ನಿಧಿ ಬಂದಿದೆ. ಆ ಪ್ರದೇಶಗಳಿಗೂ ನೀಡಬೇಕು ಎಂಬುದಾಗಿ ಅವರ ಬಳಿ ಲೆಕ್ಕ ಕೇಳಿದ್ದೆ’ ಎಂದು ಹೇಳಿದರು.</p>.<p>ಇದನ್ನೂ ಓದಿ:<a href="https://www.prajavani.net/district/mysore/mysore-city-corporation-commissioner-shilpa-nag-and-rohini-sindhuri-issue-in-mysore-district-835912.html" itemprop="url">ಒಬ್ಬರ ಅಹಂನಿಂದ ವ್ಯವಸ್ಥೆ ಹದಗೆಡಬಾರದು: ಸಿಂಧೂರಿ ವಿರುದ್ಧ ಶಿಲ್ಪಾ ಮತ್ತೆ ಆಕ್ರೋಶ </a></p>.<p>‘ಪಾಲಿಕೆಯ ವಾರ್ಡ್ಗಳಲ್ಲಿ ಎಷ್ಟು ಕೊರೊನಾ ಸೋಂಕು ಪ್ರಕರಣಗಳಿವೆ ಎಂಬ ಬಗ್ಗೆಯೂ ಅವರು ಸರಿಯಾದ ಮಾಹಿತಿ ನೀಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಯಾರಿಗೆ ಒತ್ತಡ ಇಲ್ಲ ಹೇಳಿ? ಕೇಂದ್ರದಿಂದ ಹಿಡಿದು ರಾಜ್ಯದವರೆಗೆ ಎಲ್ಲರೂ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ಕಾರ್ಯಕರ್ತರಿಗಿಂತ ಯಾರಿಗೆ ಹೆಚ್ಚು ಒತ್ತಡವಿದೆ? ಕೇಳಿದ ಮಾಹಿತಿಯನ್ನು ಸರಿಯಾಗಿ ನೀಡಬೇಕಲ್ಲವೇ’ ಎಂದು ಕೇಳಿದರು.</p>.<p>‘ನಿಮ್ಮ ಸೀನಿಯರ್ ಮೇಲೆ ಅಸಮಾಧಾನವಿದ್ದರೆ ಕ್ಯಾಮೆರಾ ಮುಂದೆ ಬರುತ್ತೀರಾ? ಸೀನಿಯರ್ ಬಳಿ ಹೇಳಿಕೊಳ್ಳುತ್ತೀರಿ, ಇಲ್ಲವೇ ಲಿಖಿತ ದೂರು ನೀಡುತ್ತೀರಿ. ಎಲ್ಲದಕ್ಕೂ ಒಂದು ವ್ಯವಸ್ಥೆ, ಕ್ರಮ ಎಂಬುದು ಇರುತ್ತದೆ. ಕುಂದುಕೊರತೆ ಹೇಳಿಕೊಳ್ಳಲೂ ವೇದಿಕೆ ಇದೆ. ಆ ವ್ಯವಸ್ಥೆ ಮೀರಿ ಮಾತನಾಡಬಾರದು’ ಎಂದರು.</p>.<p>‘ಶಿಲ್ಪಾನಾಗ್ ಫೆ.15ರಂದು ಮೈಸೂರು ನಗರಕ್ಕೆ ಪಾಲಿಕೆ ಆಯುಕ್ತರಾಗಿ ಬಂದರು. ಇತ್ತೀಚಿನವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಕಳೆದ 15 ದಿನಗಳಲ್ಲಿ ಮಾತ್ರ ಏಕೆ ಸಮಸ್ಯೆ’ ಎಂದು ಪ್ರಶ್ನಿಸಿದರು.</p>.<p>ಇದನ್ನೂ ಓದಿ:<a href="https://www.prajavani.net/district/mysore/mysuru-city-corporation-commissioner-shilpa-nag-resigned-for-her-post-835700.html" itemprop="url">ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ: ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ರಾಜೀನಾಮೆ </a></p>.<p>‘ಅಧಿಕಾರಿಗಳಿಗೆ ಒಂದು ವೇದಿಕೆ ಹಾಗೂ ಹುದ್ದೆಯ ಶ್ರೇಣಿ ಇರುತ್ತದೆ. ಅವರಿಗೆ ಉತ್ತರ ಕೊಡುವುದು ನನ್ನ ಜವಾಬ್ದಾರಿ ಅಲ್ಲ. ಸರ್ಕಾರಕ್ಕೆ ವರದಿ ನೀಡುತ್ತೇನೆ. ಮುಖ್ಯ ಕಾರ್ಯದರ್ಶಿಯ ಗಮನಕ್ಕೂ ತಂದಿದ್ದೇನೆ’ ಎಂದು ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>