ಮೈಸೂರು: ತಾಲ್ಲೂಕಿನ ಹಿನ್ಕಲ್ನ ಕಾಳಿದಾಸ ಬಳಕೆದಾರರ ಸಹಕಾರ ಸಂಘಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎಚ್.ಸಿ. ರಾಜು ಮತ್ತು ಉಪಾಧ್ಯಕ್ಷರಾಗಿ ಧರ್ಮ ಅವಿರೋಧವಾಗಿ ಆಯ್ಕೆಯಾದರು.
ಬಳಿಕ ಮಾತನಾಡಿದ ರಾಜು, ‘ಸಂಘದಲ್ಲಿ 13 ಮಂದಿ ನಿರ್ದೇಶಕರಿದ್ದು, 160 ಸದಸ್ಯರಿದ್ದಾರೆ. ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡಲು ನಿರ್ಧರಿಸಲಾಗಿದೆ. ಜನರಿಗೆ ಕೈಗೆಟುಕುವ ದರದಲ್ಲಿ ಆಹಾರ ಧಾನ್ಯ ವಿತರಣೆ, ಸಾಲ ಸೌಲಭ್ಯ ಒದಗಿಸುವುದು ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.
ನಿರ್ದೇಶಕರಾದ ಜಿ.ಕುಮಾರ್, ನಾಗರಾಜು, ಸ್ವಾಮಿ, ಮಂಗಳ, ಕೆ.ಕವಿತಾ, ಎಸ್. ಕುಮಾರ, ಜಯಮ್ಮ, ಸುಶೀಲಾ, ಯಶೋದಾ, ಪ್ರಕಾಶ, ಎನ್. ಪ್ರಶಾಂತ್ ಹಾಜರಿದ್ದರು.